ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ವಿನಯಾ ಕಥಾಸಂಕಲನಕ್ಕೆ ಛಂದ ಪುಸ್ತಕ ಬಹುಮಾನ

By Staff
|
Google Oneindia Kannada News

Dr. Vinaya selected for Chanda Pustaka awardಕನ್ನಡದ ಹೊಸ ಕಥೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ 'ಛಂದ ಪುಸ್ತಕ' ಬಹುಮಾನ ಈ ಬಾರಿ ಡಾ. ವಿನಯಾ ಅವರ 'ಊರ ಒಳಗಣ ಬಯಲು' ಕಧಾಸಂಕಲನಕ್ಕೆ ಲಭಿಸಿದೆ.

2007 ಸಾಲಿನ ಈ ಬಹುಮಾನ ಪುಸ್ತಕದ ಪ್ರಕಟಣೆ, ಐದು ಸಾವಿರ ರುಪಾಯಿ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಲಿದೆ ಎಂದು ಛಂದ ಪುಸ್ತಕ ಪ್ರಕಾಶನ ತಿಳಿಸಿದೆ.

ಪ್ರತಿವರ್ಷ ಹೊಸ ಕಥೆಗಾರರಿಂದ ಎಲ್ಲೂ ಪ್ರಕಟವಾಗದ ಕಥೆಗಳ ಹಸ್ತಪ್ರತಿಗಳನ್ನು ಛಂದ ಪುಸ್ತಕ ಪ್ರಕಾಶನ ಆಹ್ವಾನಿಸುತ್ತದೆ. ಅದರಲ್ಲಿ ವಿಜೇತರಾದ ಹೊಸ ಕಥೆಗಾರರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡುವ ಪರಿಪಾಠವನ್ನು ಪ್ರಕಾಶನ ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ ಸುಮಾರು 70 ಕಥೆಗಾರರು ಭಾಗವಹಿಸಿದ್ದರು.

ಈ ಬಾರಿಯ ನಿರ್ಣಯವನ್ನು ಕಥೆಗಾರ್ತಿ ನೇಮಿಚಂದ್ರ ಅವರು ನೀಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಕಳೆದ ಮೂರು ವರುಷಗಳಿಂದಲೂ ಉಪನ್ಯಾಸ ವೃತ್ತಿಯಲ್ಲಿರುವವರೇ ಬಹುಮಾನವನ್ನು ಪಡೆಯುತ್ತಿದ್ದಾರೆ.

ಹೆಚ್ಚಿನ ವಿವರ ಮತ್ತು ಪುಸ್ತಕಗಳಿಗಾಗಿ ಸಂಪರ್ಕಿಸಿ :

ವಸುಧೇಂದ್ರ
ಐ-004, ಮಂತಿರ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - 560 076
ದೂರವಾಣಿ: 98444 22782

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X