ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್ನಲ್ಲಿ ಭಾನುವಾರದ ವಿಶೇಷ
ಬೆಂಗಳೂರು, ಸೆ. 18 : ಶಾಲ ಭಂಜಿಕೆ (ಚಾರಿತ್ರಿಕ ಥ್ರಿಲ್ಲರ್ ಗಳು, ಬರೆದವರು ಡಾ. ಕೆ.ಎನ್. ಗಣೇಶಯ್ಯ ) ಮತ್ತು ಜಾನಕಿ ಕಾಲಂ-2 (ಜೋಗಿಮನೆಯ ಹಿತ್ತಲ ಹಾಡು, ಬರೆದವರು ಜಾನಕಿ) ಈ ಶೀರ್ಷಿಕೆಗಳನ್ನು ಹೊತ್ತ ಎರಡು ಕೃತಿಗಳು ಛಂದ ಪುಸ್ತಕ ವತಿಯಿಂದ ಬಿಡುಗಡೆಗೆ ಸಿದ್ಧವಾಗಿವೆ.
ಬೆಂಗಳೂರು, ಬಸವನಗುಡಿಯ ಗಾಂಧೀಬಜಾರ್ ಸಮೀಪದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕೃತಿ ಬಿಡುಗಡೆ ಸೆ. 23ರ ಭಾನುವಾರ ಬೆಳಗ್ಗೆ 10ಗಂಟೆಗೆ ನೆರವೇರಲಿದೆ. ನೀವು ಅಲ್ಲಿಗೆ ಬರಬೇಕು ಎಂದು ಕೋರಿದ್ದಾರೆ ಛಂದ ಪುಸ್ತಕದ ವತಿಯಿಂದ ಕತೆಗಾರ ವಸುಧೇಂದ್ರ : [email protected].
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವವರು ; ಡಾ. ಯು. ಆರ್ . ಅನಂತಮೂರ್ತಿ, ಪತ್ರಕರ್ತ ನಾಗೇಶ ಹೆಗಡೆ ಮತ್ತು ನಟ ರಮೇಶ್ ಅರವಿಂದ್.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, September 18, 2007, 17:31 [IST]