ಮೇ 20 : ‘ಇದೇ ಇರಬೇಕು ಕವಿತೆ’,‘-...ಮತ್ತಿತರ ಕತೆಗಳು’
ಮೈಸೂರು
:
ಕನ್ನಡ
ಸಾಹಿತ್ಯ.ಕಾಂ,
ಪ್ರಕಾಶನ
ಕ್ಷೇತ್ರಕ್ಕೆ
ಕಾಲಿಟ್ಟಿದೆ.
ಸಲ್ಲಾಪ
ಪ್ರಕಾಶನದ
ಹೆಸರಿನಲ್ಲಿ
ಎರಡು
ಪುಸ್ತಕಗಳನ್ನು
ಪ್ರಕಟಿಸಿದ್ದು,
ಲೋಕಾರ್ಪಣೆ
ಸಮಾರಂಭ
ಮೇ.20ರಂದು
ನಡೆಯಲಿದೆ.
ನಗರದ ಶ್ರೀ ಜಯಚಾಮರಾಜೇಂದ್ರಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ 10.30ಕ್ಕೆ ಪುಸ್ತಕ ಬಿಡುಗಡೆ ಮತ್ತು ಸಾಹಿತ್ಯ.ಕಾಂನ ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ನೆರವೇರಲಿದೆ.
ವಿಕ್ರಮ ಹತ್ವಾರ ಅವರ ‘ಇದೇ ಇರಬೇಕು ಕವಿತೆ’ ಮತ್ತು ‘ಕಟ್ ಸೀಟು ಮತ್ತಿತರ ಕತೆಗಳು’(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್ ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ ಎಕ್ಲಾಸ್ಪುರ್, ಗೋಪಿನಾಥ ತಾತಾಚಾರ್, ಹಾಗು ವಿಕ್ರಂ ಹತ್ವಾರರ ಕತೆಗಳು) ಕೃತಿಗಳು ಬಿಡುಗಡೆಗೊಳ್ಳಲಿವೆ.
ಕುವೆಂಪು ವಿವಿ ವಿಶ್ರಾಂತ ಉಪಕುಲಪತಿ ಚಿದಾನಂದ ಗೌಡ ಅಧ್ಯಕ್ಷತೆವಹಿಸುವರು. ಲಿಂಗದೇವರು ಹಳೆಮನೆ, ಡಾ. ಬಿ ಜಿ ಸಂಗಮೇಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೃತಿಗಳು ಹಾಗು ಕನ್ನಡಸಾಹಿತ್ಯ.ಕಾಂ ಕುರಿತು ನಟ ಸುಚೇಂದ್ರ ಪ್ರಸಾದ್ ಮಾತನಾಡುವರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಅರುಣ್
ಮೈಸೂರು-98453
85156
ಅರೇಹಳ್ಳಿ
ರವಿ-99004
39930
(ದಟ್ಸ್ ಕನ್ನಡ ವಾರ್ತೆ)