ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪ ಮೊಯ್ಲಿ ಕಾದಂಬರಿ ನವದೆಹಲಿಯಲ್ಲಿ ಬಿಡುಗಡೆ

By Staff
|
Google Oneindia Kannada News


ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ‘ತೆಂಬರೆ’ ಕನ್ನಡ ಕಾದಂಬರಿಯ ಅನುವಾದಿತ ಕೃತಿ ‘ದಿ ಎಡ್ಜ್‌ ಆಫ್‌ ಟೈಮ್‌’ ಬುಧವಾರ ಸಂಜೆ ನವದೆಹಲಿಯಲ್ಲಿ ಬಿಡುಗಡೆಗೊಳ್ಳಲಿದೆ.

ಖ್ಯಾತ ವಿಮರ್ಶಕ ಸಿ.ಎನ್‌.ರಾಮಚಂದ್ರನ್‌ ಅನುವಾದಿಸಿರುವ ಈ ಕೃತಿಯನ್ನು, ದೆಹಲಿ ಕರ್ನಾಟಕ ಸಂಘದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಗೋಪಿಚಂದ್‌ ನಾರಂಗ್‌ ಬಿಡುಗಡೆ ಮಾಡುವರು.

ಹಂಪಿ ವಿ.ವಿ. ಕುಲಪತಿ ಡಾ.ಬಿ.ಎ.ವಿವೇಕ ರೈ, ಪುಸ್ತಕದ ಬಗ್ಗೆ ಮಾತನಾಡುವರು. ಹಿರಿಯ ನ್ಯಾಯವಾದಿ ಡಾ.ಎಲ್‌.ಎಂ.ಸಿಂಘ್ವಿ ಸಮಾರಂಭದ ಅಧ್ಯಕ್ಷತೆವಹಿಸುವರು.

‘ಕೊಟ್ಟ’, ‘ಸಾಗರದೀಪ’ ಮತ್ತಿತರ ಕಾದಂಬರಿಗಳನ್ನು ವೀರಪ್ಪ ಮೊಯಿಲಿ ಈ ಹಿಂದೆ ಬರೆದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X