ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಭಕ್ತರ ಮನೆಯಲ್ಲಿ ಈ ಎಂಟು ಸಂಪುಟಗಳೂ ಇರಲಿ!

By Staff
|
Google Oneindia Kannada News


ಬೆಂಗಳೂರು, ಆಗಸ್ಟ್ 16 : ಗಾಂಧಿ ಉಪನಿಷತ್ತುಈಗ ಎಂಟು ಸಂಪುಟಗಳಲ್ಲಿ ಲಭ್ಯವಿದೆ. ಡಾ.ಮತ್ತೂರು ಕೃಷ್ಣಮೂರ್ತಿ ಅವರು ಈ ಸಂಪುಟಗಳನ್ನು ಬರೆದಿದ್ದಾರೆ.

ಭಾರತೀಯ ವಿದ್ಯಾಭವನ ಮತ್ತು ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಉಪನಿಷತ್ತು ಲೋಕಾರ್ಪಣೆಗೊಂಡಿತು. ಮಹಾತ್ಮ ಗಾಂಧೀಜಿ ಅವರ ಬದುಕಿನ ವಿವಿಧ ಘಟನೆಗಳನ್ನು ನಿರೂಪಿಸುತ್ತಾ, ಸಂದೇಶವನ್ನು ಲೇಖಕರು ಪುಸ್ತಕದಲ್ಲಿ ನೀಡಿದ್ದಾರೆ.

ಕನ್ನಡ ದಿನಪತ್ರಿಕೆಯೊಂದರಲ್ಲಿ ಜನಪ್ರಿಯ ಅಂಕಣವಾಗಿ ಮೂಡಿ ಬಂದಿದ್ದ ಗಾಂಧಿ ಉಪನಿಷತ್ತು, ಈಗ ಪುಸ್ತಕ ರೂಪ ಹೊಂದಿದೆ. ಈ ಪುಸ್ತಕದ ಇಂಗ್ಲಿಷ್ ಅವತರಣಿಕೆಯೂ ಲಭ್ಯವಿದ್ದು, ಎಸ್.ಎನ್.ಚಂದ್ರಶೇಖರ್ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗಾಂಧಿ ಸ್ಮಾರಕ ನಿಧಿ ಮುಖ್ಯಸ್ಥ ಡಾ.ಹೆಚ್.ಶ್ರೀನಿವಾಸಯ್ಯ, ನೂರು ವರ್ಷಗಳ ಹಿಂದೆ ಗಾಂಧಿ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ ಎಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X