ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್‌.ಜಿ. ಸೋಮಶೇಖರ ರಾವ್‌ರ ‘ನೆನಪಿನ ಹೊನಲು’

By Staff
|
Google Oneindia Kannada News


H.G.Somashekhara Raos books released ಬೆಂಗಳೂರು : ನಟ, ಲೇಖಕ ಹೆಚ್‌.ಜಿ.ಸೋಮಶೇಖರ ರಾವ್‌ ಅವರ ಎರಡು ಪುಸ್ತಕಗಳು ಇತ್ತೀಚೆಗೆ ಬಿಡುಗಡೆಯಾದವು.

ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸೋಮಶೇಖರ್‌ ಅವರ ‘ನೆನಪಿನ ಹೊನಲು’ ಪುಸ್ತಕವನ್ನು ಹೆಚ್‌.ಎಸ್‌.ವೆಂಕಟೇಶಮೂರ್ತಿ, ‘ಕಂಡದ್ದು ಕೇಳಿದ್ದು’ ಪುಸ್ತಕವನ್ನು ಡಾ.ಗೀತಾ ರಾಮಾನುಜಮ್‌ ಬಿಡುಗಡೆ ಮಾಡಿದರು.

ಪ್ರೊ.ಜಿ.ವೆಂಕಟಸುಬ್ಬಯ್ಯ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಡಾ.ಸುಮತೀಂದ್ರ ನಾಡಿಗ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಲಕ್ಷ್ಮೀನಾರಾಯಣ ಭಟ್‌, ಬರಗೂರು ರಾಮಚಂದ್ರಪ್ಪ, ನಾಗಾಭರಣ, ಹೆಚ್‌.ಜಿ.ದತ್ತಾತ್ರೇಯ, ಪ್ರೊ. ಎಲ್‌.ಎಸ್‌.ಶೇಷಗಿರಿ ರಾವ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಸೋಮಶೇಖರ ರಾವ್‌ ಎಂದರೆ ‘ಮಿಥಿಲೆಯ ಸೀತೆಯರು’ ಚಿತ್ರ ನೆನಪಾಗುತ್ತದೆ. ಆ ಚಿತ್ರವೂ ಸೇರಿದಂತೆ ಅನೇಕ ಚಿತ್ರಗಳು ಮತ್ತು ಕಿರುತೆರೆ ಧಾರಾವಾಹಿಗಳ ಮೂಲಕ, ಸೋಮಶೇಖರ್‌ ನಾಡಿಗೆ ಪರಿಚಿತರು. ಕೆನರಾ ಬ್ಯಾಂಕ್‌ನಲ್ಲಿ ಎಜಿಎಂ ಆಗಿದ್ದ ಅವರು, ಬಣ್ಣದ ಬದುಕು ಮತ್ತು ಅಕ್ಷರ ಲೋಕದ ಜೊತೆ ನಂಟು ಉಳಿಸಿಕೊಂಡವರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X