ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಕೀಲ ಸಿ.ಎಚ್.ಹನುಮಂತರಾಯರ ಪುಸ್ತಕ ಬಿಡುಗಡೆ
ಬೆಂಗಳೂರು
:
ಖ್ಯಾತ
ಕ್ರಿಮಿನಲ್
ವಕೀಲ
ಸಿ.ಎಚ್.ಹನುಮಂತರಾಯ
ಅವರ
‘ವಕೀಲರೊಬ್ಬರ
ವಗೈರೆಗಳು’
ಕೃತಿ
ಲೋಕಾರ್ಪಣೆಗೊಂಡಿದೆ.
ಈ ಕೃತಿಯನ್ನು ಓದಿದರೆ, ಎಂತಹ ಪಾತಕಿಗಳ ಮನಸ್ಸೂ ಸಹ ಪರಿವರ್ತನೆಯಾಗುತ್ತದೆ. ತಮ್ಮ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಮೂಡುತ್ತದೆ ಎಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ , ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ಲಂಕೇಶ್ ಪ್ರಕಾಶನ ಹೊರತಂದಿರುವ ಕೃತಿಯನ್ನು ಚಂದ್ರಶೇಖರ ಕಂಬಾರ, ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಇಂದ್ರಜಿತ್ ಲಂಕೇಶ್, ಪತ್ರಕರ್ತ ಗಂಗಾಧರ ಕುಷ್ಟಗಿ, ವಿಮರ್ಶಕ ಕಿ.ರಂ.ನಾಗರಾಜ್ ಮತ್ತಿತರರು ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, April 11, 2002, 5:30 [IST]