ಟ್ವೆಂಟ್ವಿ ಅಪಮಿತ್ರ ಮೈತ್ರಿ ಸತ್ಯಾಸತ್ಯತೆ ಬಗ್ಗೆ ತಿಳಿಯಿರಿ
ಬೆಂಗಳೂರು, ಡಿ.10:ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದ ಟ್ವೆಂಟಿ ಟ್ವೆಂಟಿ ಒಪ್ಪಂದದ ಬಗ್ಗೆ ಕುರಿತಾದ ಪುಸ್ತಕ ಸೋಮವಾರ(ಡಿ.10) ಅನಾವರಣಗೊಳ್ಳಲಿದೆ.
ಲೇಖಕ ಎಂ.ಎಸ್ . ರಾಘವೇಂದ್ರರವರು ಬರೆದಿರುವ ಈ ಪುಸ್ತಕವನ್ನು ಅನಾವರಣಗೊಳಿಸಲು ಕೆ. ಸತ್ಯನಾರಾಯಣ ಹಾಗೂ ಎ.ಕೆ. ಸುಬ್ಬಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಕಾರ್ಯಕ್ರಮ ಜರುಗಲಿದೆ. ಎಂ.ಎಸ್.ರಾಘವೇಂದ್ರರವರು ಟಿವಿ 9ನ ಪ್ರಮುಖ ಕಾರ್ಯಕ್ರಮವಾದ 'ವಾರೆಂಟ್' ನ ನಿರ್ಮಾಪಕರಾಗಿದ್ದಾರೆ.
***
ಕಾಕತ್ಕರ್ ಪುಸ್ತಕ ಬಿಡುಗಡೆ
ಉದಯ ಟಿವಿಯ ' ಕ್ರೈಂ ಸ್ಟೋರಿ' ಕಾರ್ಯಕ್ರಮದ ರೂವಾರಿ ಬಾಲಕೃಷ್ಣ ಕಾಕತ್ಕರ್ ಅವರು ಬರೆದಿರುವ 'ಮರಣ ಶಿಕಾರಿ' ಕೃತಿ ಇಂದು(ಡಿ.10) ಮಧ್ನಾಹ್ನ ಬಿಡುಗಡೆಗೊಳ್ಳಲಿದೆ.
ಪುಸ್ತಕ ಕುರಿತು ಖ್ಯಾತ ವಿಮರ್ಶಕ ಕಿ.ರಂ.ನಾಗರಾಜರವರು ಮಾತನಾಡಲಿದ್ದಾರೆ. ಖ್ಯಾತ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.ಲೇಖಕಿ ಡಾ.ವಿಜಯಾ ಅವರಿಗೆ ಮೊದಲ ಪುಸ್ತಕ ಸಮರ್ಪಣೆಯಾಗಲಿದೆ. ಪುಸ್ತಕ ಅನಾವರಣದ ಹೊಣೆಯನ್ನು ಅಗ್ನಿ ಪತ್ರಿಕೆಯ ಸಂಪಾದಕ ಶ್ರೀಧರ್ ಹೊತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಶುಭ ಕೋರಲು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮುಂತಾದ ಗಣ್ಯರು ಆಗಮಿಸಲಿದ್ದಾರೆ.
ಸಮಯ:
12
ಗಂಟೆ
ಸ್ಥಳ:
ಪ್ರೆಸ್
ಕ್ಲಬ್
(ದಟ್ಸ್ ಕನ್ನಡ ವಾರ್ತೆ)