ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈವಾರ ಮಹತ್ವದ ಅರ್ಧ ಡಜನ್‌ ಪುಸ್ತಕಗಳ ಬಿಡುಗಡೆ

By Staff
|
Google Oneindia Kannada News

ಬೆಂಗಳೂರು : ನವಕರ್ನಾಟಕ ಪ್ರಕಾಶನ 6ಹೊಸ ಕೃತಿಗಳನ್ನು ಹೊರತರುತ್ತಿದ್ದು, ಇವುಗಳ ಬಿಡುಗಡೆ ಸಮಾರಂಭ ನವೆಂಬರ್‌ 12 ರಂದು ನಡೆಯಲಿದೆ.

ಅಂದು ಸಂಜೆ 5ಗಂಟೆಗೆ, ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸಮಾರಂಭ ನಡೆಯಲಿದೆ. ಪ್ರಸಾರ ಭಾರತಿದಕ್ಷಿಣ ಮತ್ತು ಪಶ್ಚಿಮ ವಲಯದ ಉಪ ಮಹಾನಿರ್ದೇಶಕ ಡಾ.ಎಚ್‌.ಆರ್‌. ಕೃಷ್ಣಮೂರ್ತಿ ಕೃತಿಗಳನ್ನು ಬಿಡುಗಡೆ ಮಾಡುವರು.

ನೆಹರೂ ತಾರಾಲಯದ ಗೌರವ ನಿರ್ದೇಶಕ ಡಾ.ಸಿ.ವಿ.ವಿಶ್ವೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಾಗೇಶ ಹೆಗಡೆ ಮತ್ತು ಡಾ. ವಿಜಯಾ ಕೃತಿಗಳ ಪರಿಚಯ ಮಾಡಿಕೊಡುವರು.

ಬಿಡುಗಡೆಗೊಳ್ಳಲಿರುವ ಕೃತಿಗಳು ಮತ್ತು ಕೃತಿಕರ್ತರ ವಿವರ :

  • ‘ಫಿಸಿಕ್ಸ್‌ ಮತ್ತು ಐನ್‌ಸ್ಟೈನ್‌’ - ಪ್ರೊ. ಅಡ್ಯನಡ್ಕ ಕೃಷ್ಣ ಭಟ್‌

  • ‘ಹೆಜ್ಜೆ ಗುರುತು’- ವ್ಯಾಸರಾಯ ಬಲ್ಲಾಳ

  • ‘ನೆನಪಿನ ಅಲೆಗಳು’ - ಪ್ರೊ. ಜೆ.ಆರ್‌. ಲಕ್ಷ್ಮಣರಾವ್‌

  • ‘ಜೀವ ಜಗತ್ತಿನ ಕೌತುಕಗಳು: ಲಾಲನೆ ಪಾಲನೆ’ ಮತ್ತು ‘ಪ್ರೀತಿ ಪ್ರಣಯ’ - ಡಾ.ಎನ್‌.ಎಸ್‌. ಲೀಲಾ

  • ‘ಬಹಿಷ್ಕೃತ ಒಂದು ನೆನಪು’ - ಡಾ.ನರೇಂದ್ರ ಜಾಧವ್‌
  • (ಇನ್ಫೋ ವಾರ್ತೆ)

    ಮುಖಪುಟ / ಸಾಹಿತ್ಯ-ಸಂಸ್ಕೃತಿ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X