‘ಛಂದ’ ಕತೆ ಪುಸ್ತಕ ಹಸ್ತಪ್ರತಿ ಆಹ್ವಾನ
ಬೆಂಗಳೂರು : ಹೊಸ ಲೇಖಕರಿಗೆ ಪುಸ್ತಕ ಪ್ರಕಟಣೆ ದಿನೇದಿನೆ ಕಷ್ಟವಾಗುತ್ತಿರುವ ಈ ಸಮಯದಲ್ಲಿ ಪ್ರತಿ ವರ್ಷ ಒಬ್ಬ ಹೊಸ ಕತೆಗಾರನ ಕಥಾ ಸಂಕಲನವನ್ನು ಪ್ರಕಟಿಸಲು ಛಂದ ಪುಸ್ತಕ ಮುಂದಾಗಿದೆ. ಅದಕ್ಕಾಗಿ ಹೊಸ ಕತೆಗಾರರ ಕತೆಗಳನ್ನು ಅದು ಆಹ್ವಾನಿಸಿದೆ.
ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಕತೆಗಳನ್ನು ಬರೆದು ಅಥವಾ ಡಿಟಿಪಿ ಮಾಡಿಸಿ ಕಳಿಸಬೇಕು. ಅಕ್ಷರಗಳು ಸ್ಫುಟವಾಗಿರುವುದು ಕಡ್ಡಾಯ.
ಆಯ್ಕೆಯಾದ ಒಬ್ಬರ ಸಂಕಲನವನ್ನು ಛಂದ ಪುಸ್ತಕ ಪ್ರಕಾಶಿಸಲಿದೆ. ಸುಮಾರು 100 ಪುಟಗಳ ಚೆಂದ ಮುದ್ರಣದ ಈ ಪುಸ್ತಕವನ್ನು 2005ರ ಜನವರಿ 26ರಂದು ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.
ಎಲ್ಲ ವಿಷಯಗಳಲ್ಲೂ ಪ್ರಕಾಶಕರದೇ ಅಂತಿಮ ನಿರ್ಧಾರ.
ಕತೆಗಳನ್ನು ಕಳಿಸಬೇಕಾದ ವಿಳಾಸ: ಛಂದ ಪುಸ್ತಕ, ಕೇರಾಫ್ ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 76.
ಕೊನೆಯ ದಿನಾಂಕ: ಸೆಪ್ಟೆಂಬರ್ 30.
ವಿವರಗಳಿಗೆ: [email protected]
(ಇನ್ಫೋ ವಾರ್ತೆ)