ದೇವೇಗೌಡ ಪುಸ್ತಕ ಬರೆದಿದ್ದಾರೆ; ಹೆಸರು ‘ಕಗ್ಗತ್ತಲಿನತ್ತ ಕರ್ನಾಟಕ’
ಬೆಂಗಳೂರು : ರಾಜಕೀಯ ದಾಳಗಳನ್ನು ಮಾತ್ರ ಎಸೆಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸದ್ದಿಲ್ಲದೆ ಕಿರು ಹೊತ್ತಿಗೆಯಾಂದನ್ನು ಬರೆದಿದ್ದಾರೆ. ಪುಸ್ತಕದ ಹೆಸರು ‘ಕಗ್ಗತ್ತಲಿನತ್ತ ಕರ್ನಾಟಕ’.
ಭಾನುವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಯೋಜನಾ ಆಯೋಗದ ಮಾಜಿ ಸದಸ್ಯ, ಅರ್ಥಶಾಸ್ತ್ರಜ್ಞ ಡಾ।ಜಿ.ತಿಮ್ಮಯ್ಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಪುಸ್ತಕ ವಿಶ್ಲೇಷಣಾತ್ಮವಾಗಿದೆ. ಇದೊಂದು ಸಂಶೋಧನಾ ದಾಖಲೆ ಎಂಬುದು ತಿಮ್ಮಯ್ಯನವರ ಅಂಬೋಣ.
ಯಾರನ್ನು ದೂಷಿಸುವುದಕ್ಕಾಗಲೀ, ವ್ಯಕ್ತಿಗತ ಲಾಭಕ್ಕಾಗಲೀ ಈ ಪುಸ್ತಕವನ್ನು ನಾನು ಬರೆದಿಲ್ಲ. ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಪ್ರಯತ್ನ ಅಷ್ಟೆ. ಇದರಲ್ಲಿ ಏನಾದರೂ ತಪ್ಪಿದ್ದರೆ ಮಾಧ್ಯಮದವರು ಎತ್ತಿ ಹಿಡಿಯಲಿ ಎಂದು ದೇವೇಗೌಡ ಕರೆ ಕೊಟ್ಟರು.
ರಾಜ್ಯದ ವಿದ್ಯುತ್ ಪರಿಸ್ಥಿತಿ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆಯಬೇಕು. ಕರ್ನಾಟಕದಲ್ಲಿ 12.6 ಪ್ರತಿಶತ ವಿದ್ಯುತ್ ಕೊರತೆ ಇದೆ. ಮಧ್ಯಪ್ರದೇಶ ಹೊರತುಪಡಿಸಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಮತ್ತು ಸಮಾಜ ವಿಭಾಗದ ಸಂಯೋಜಕ ಪ್ರೊ। ಬಾಬು ಮ್ಯಾಥ್ಯೂ ಪುಸ್ತಕದ ವಿಶ್ಲೇಷಣೆ ಮಾಡುತ್ತಾ ಹೇಳಿದರು.
ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ, ಮಂಗಳೂರು ವಿವಿ ಮಾಜಿ ಉಪ ಕುಲಪತಿ ಪ್ರೊ। ಬಿ.ಷೇಕ್ ಅಲಿ ಮತ್ತಿತರ ಗಣ್ಯರು ವೇದಿಕೆ ಮೇಲಿದ್ದರು.
(ಇನ್ಫೋ ವಾರ್ತೆ)