ಇಲ್ಲಿ ಜನರ ಆರ್ತನಾದ, ಅಲ್ಲಿ ಸಂಗೀತದ ನಿನಾದ!
27ರ ಬೆಳಿಗ್ಗೆಯಿಂದಲೇ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಆರಂಭವಾಯಿತು. ಅಗ್ನಿಶಾಮಕ ದಳ-ಬಳ್ಳಾರಿ ಪೊಲೀಸ್ ಪಡೆ-ಪೂನಾದಿಂದ ಬಂದಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸದಸ್ಯರೆಲ್ಲ ಭಾರಿ ಶ್ರಮ ವಹಿಸಿ ಕಾರ್ಯಾಚರಣೆ ಮಾಡಿದರು. ನಾಲ್ಕು ಅಂತಸ್ತು ನೆಲಕಚ್ಚಿ ಇನ್ನುಳಿದ ಮೂರು ಅಂತಸ್ತುಗಳು ದುರ್ಬಲವಾಗಿ ನಿಂತಿದ್ದವು. ಇವುಗಳ ಗೋಡೆಗಳೆಲ್ಲ ಸಂಪೂರ್ಣ ಬಿರುಕು ಬಿಟ್ಟಿದ್ದವು. ಹಲವೆಡೆ ಇವುಗಳು ಜೋತಾಡುತ್ತಿದ್ದವು. ಇಂಥ ಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡುವವರು ಆಪತ್ತಿನ ಅಂಚಿನಲ್ಲಿಯೇ ಇದ್ದರು. ಅಲ್ಲಿಂದ ವರದಿ ಮಾಡುತ್ತಿದ್ದ ಪತ್ರಕರ್ತರ ಸ್ಥಿತಿಯೂ ಇದೇ ಆಗಿತ್ತು! ಹೊರ ಬರುತ್ತಿದ್ದ ಶವಗಳ ಗುರುತು ಪತ್ತೆ ಹಚ್ಚಿದೊಡನೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆದರೆ ಕೇವಲ 70 ಕಿಲೋಮೀಟರ್ ದೂರದಲ್ಲಿ ನೃತ್ಯ-ಸಂಗೀತ-ಉತ್ಸವದ ನಿನಾದ ಮೊಳಗುತ್ತಿತ್ತು!
ಇಷ್ಟೆಲ್ಲ ವಿಚಾರ ಏಕೆ ಹೇಳಿದನೆಂದರೆ ಇಂಥ ದುರಂತದ ಸಂದರ್ಭದಲ್ಲಿ ಮತ್ಯಾರೆ ಉಸ್ತುವಾರಿ ಸಚಿವರಾಗಿದ್ದರೂ ಉತ್ಸವ ರದ್ದುಗೊಳಿಸುತ್ತಿದ್ದರು. ಕಣ್ಣಮುಂದೆ ಕಟ್ಟುವ ಹೃದಯ ವಿದ್ರಾವಕ ಇರುವಾಗ ಉತ್ಸವದ ಸೊಬಗಿಗೆ ಅರ್ಥವಿದೆಯೇ.. ಈ ಪ್ರಶ್ನೆಯನ್ನು ಜನಾರ್ದನ ರೆಡ್ಡಿ ಹಾಕಿಕೊಳ್ಳಲಿಲ್ಲ. ಇದಕ್ಕೆ ಉದಾಹರಣೆ 'ಮೂರು ದಿನ ಅದ್ದೂರಿಯಿಂದ ನಡೆದ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ"!
ಮುಂದೆ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ವಿಜಯನಗರ ಥೀಮ್ ಪಾರ್ಕ್ ಸ್ಥಾಪನೆ ನಿರ್ಧಾರ. ಇದರಿಂದಾದ ಘಟನಾವಳಿಗಳ ಬಗ್ಗೆ ವಿವರಿಸುತ್ತೇನೆ. ಶ್ರೀಕೃಷ್ಣದೇವರಾಯರ ಮರು ಜನ್ಮ ಕಥೆಯೂ ಇವೆಲ್ಲವುಗಳೊಂದಿಗೂ ತಳಕು ಹಾಕಿಕೊಂಡಿದೆ ಎಂಬುದನ್ನೂ ಗಮನಿಸಿ! [ಕೃಪೆ : ವರದಿಗಾರ]