ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮನಸ್ಸು ಗಾಳಿ ಗೋಪುರವಲ್ಲ: ಜಿ.ವೆಂಕಟಸುಬ್ಬಯ್ಯ

By (ಪ್ರತ್ಯಕ್ಷ ವರದಿ : ಶ್ರೀನಿಧಿ ಡಿ.ಎಸ್)
|
Google Oneindia Kannada News


ಮೂಡಬಿದರೆ(ವಿದ್ಯಾಗಿರಿ), ನ.30 : ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ 'ನುಡಿಸಿರಿ'ಯ ಅಧ್ಯಕ್ಷೀಯ

ಕನ್ನಡದ ಸಾಹಿತ್ಯ ಪರಂಪರೆ ಬೆಳೆದು ಬಂದ ಬಗೆಯನ್ನು ಎಳೆ ಎಳೆಯಾಗಿ ವಿವರಿಸಿದ ವೆಂಕಟಸುಬ್ಬಯ್ಯ, ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಾದ ನವೋದಯ, ನವ್ಯ, ಬಂಡಾಯ ಎಲ್ಲವೂ ಜನತೆಯ ಉದ್ಧಾರಕ್ಕೆಂದೇ, ಮಾರ್ಗದರ್ಶನಕ್ಕೆಂದೇ ರಚಿತವಾದವು , ಅವುಗಳಲ್ಲಿ ತಾರತಮ್ಯ ಭಾವ ಸಲ್ಲದು ಎಂದರು.

ಕನ್ನಡ ಮನಸ್ಸು ಚಾರಿತ್ರಿಕ ಸೌಧದ ಮೇಲೆ ನಿಂತಿದೆ, ಅದು ಗಾಳಿ ಗೋಪುರವಲ್ಲ, ಸ್ಥಾವರ ಸೌಧ ಎಂದ ವೆಂಕಟಸುಬ್ಬಯ್ಯನವರು ಕನ್ನಡಿಗರ ಪರಾಕ್ರಮ ಹೇಗಿತ್ತು ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೀಡಿದರು.

ಮನೆ ಮತ್ತು ಶಾಲೆಗಳಲ್ಲಿ ಮೊದಲು ಕನ್ನಡ ಪ್ರೇಮವನ್ನು ಬೆಳೆಸುವ ಕೆಲಸವಾಗಬೇಕು , ಈ ಎರಡೂ ಪ್ರದೇಶಗಳಲ್ಲಿ ತಾಯ್ನುಡಿಯ ಪ್ರೇಮ ಬೆಳೆಯದೇ ಹೋದರೆ, ಆ ಬಳಿಕ ಅದು ಮತ್ತಿನ್ನೆಲ್ಲೂ ಬೆಳೆಯುವುದು ಸಾಧ್ಯವಿಲ್ಲ ಎಂಬ ಎಚ್ಚರಿಕೆ ಮಾತುಗಳನ್ನಾಡಿದರು, ಪ್ರೊ.ವೆಂಕಟಸುಬ್ಬಯ್ಯ.

ಮತ್ತಷ್ಟು ಸುದ್ದಿ:

ಆಳ್ವಾಸ್ ನುಡಿಸಿರಿ : ಅಕ್ಷರ ಚಾತ್ರೆಗೆ ಬಲ್ಲಾಳರಿಂದ ಚಾಲನೆ
ಆಳ್ವಾಸ್ ನುಡಿಸಿರಿ: ಜಾತ್ರೆಯ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X