ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆ ಸಮ್ಮೇಳನಕ್ಕೆತೆರೆ : ಮುಂದಿನ ಸಮ್ಮೇಳನ ನಡೆವುದೆಲ್ಲಿ?

By Staff
|
Google Oneindia Kannada News
  • ಭರತ್‌ಕುಮಾರ್‌
ಈ ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡಿದ್ದ ಎಲ್ಲ ನಿರ್ಣಯಗಳನ್ನು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಏಕೈಕ ನಿರ್ಣಯವನ್ನು ಕೈಗೊಳ್ಳುವುದರೊಂದಿಗೆ ಮೂಡಬಿದಿರೆಯ 71 ನೇ ಸಾಹಿತ್ಯ ಸಮ್ಮೇಳನ ಭಾನುವಾರ (ಡಿ.21) ಕೊನೆಗೊಂಡಿತು.

ಸಮ್ಮೇಳನದ ನಿರ್ಣಯಗಳನ್ನು ಜಾರಿಗೆ ತರುವ ಕುರಿತು ಸರ್ಕಾರ ಆಸಕ್ತಿ ವಹಿಸುತ್ತಿಲ್ಲ . ಆದುದರಿಂದ ಈ ಬಾರಿಯೂ ಇನ್ನಷ್ಟು ನಿರ್ಣಯಗಳನ್ನು ಕೈಗೊಳ್ಳುವುದರಲ್ಲಿ ಅರ್ಥವಿಲ್ಲ . ಹಳೆಯ ನಿರ್ಣಯಗಳು ಮೊದಲು ಅನುಷ್ಠಾನಕ್ಕೆ ಬರುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಬಹಿರಂಗ ಅಧಿವೇಶನ ಕೈಗೊಂಡ ನಿರ್ಣಯಕ್ಕೆ ನೆರೆದಿದ್ದ ಸಾವಿರಾರು ಜನರು ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು.

ಸಮಾನತೆಯ ಕರ್ನಾಟಕ

ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಲೇಖಕ ಬರಗೂರು ರಾಮಚಂದ್ರಪ್ಪ , ಸಮಾನತೆಯ ಕರ್ನಾಟಕವನ್ನು ರೂಪಿಸುವುದು ನಮ್ಮ ಮುಂದಿನ ಸವಾಲು, ಜಾತಿ ಧರ್ಮಗಳ್ನು ಮೀರಿದ ನೆಲೆಯಲ್ಲಿ ಸಮಾನತೆಯ ಕರ್ನಾಟಕವನ್ನು ನಾವು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ನಮ್ಮನ್ನು ಕಾಡುತ್ತಿರುವ ಜಾಗತೀಕರಣ ಹಾಗೂ ದೇಗುಲೀಕರಣ ಎನ್ನುವ ಅಪಾಯಗಳಿಗೆ ಸಾಹಿತ್ಯದ ಮೂಲಕ ಉತ್ತರ ನೀಡಬೇಕಾಗಿದೆ. ಜಾಗತೀಕರಣ ಮತ್ತು ದೇಗುಲೀಕರಣಗಳು ಅಂತಿಮ ನೆಲೆಯಲ್ಲಿ ಆರ್ಥಿಕ ಹಾಗೂ ಧಾರ್ಮಿಕ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತವೆ. ಇವುಗಳಿಂದ ಪಾರಾಗುವುದು ಅತ್ಯಂತ ಜರೂರು ಅವಶ್ಯಕತೆಯಾಗಿದೆ ಎಂದು ಬರಗೂರು ಹೇಳಿದರು.

ಕರ್ನಾಟಕವನ್ನು ಶ್ರೀಗಂಧದ ನಾಡು ಎನ್ನುತ್ತೇವೆ. ಆದರೆ, ವಾಸ್ತವದಲ್ಲಿ ಕನ್ನಡನಾಡು ಜಾಲಿ ಮರಗಳ ನಾಡಾಗುತ್ತಿದೆ ಎಂದು ಬರಗೂರು ವಿಷಾದದಿಂದ ನುಡಿದರು.

ಶನಿವಾರ ಕೃಷ್ಣ ಬಂದಿದ್ದರು !

ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಜನ ಸಾಮಾನ್ಯರಂತೆ ಸಮ್ಮೇಳನಕ್ಕೆ ಆಗಮಿಸಿದ್ದುದು ಶನಿವಾರ (ಡಿ.20) ದ ವಿಶೇಷ. ಸಾಹಿತ್ಯ ಪರಿಷತ್ತು ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಕಮಲಾ ಹಂಪನಾ ಅವರೊಂದಿಗೆ ಕೃಷ್ಣ ಸೌಹಾರ್ದ ಮಾತಕತೆ ನಡೆಸಿದರು.

ಕಮಲಾ ಹಂಪನಾ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಾಡಿದ ಸಲಹೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ. ಈ ಕುರಿತು ಕಮಲಾ ಹಂಪನಾ ಅವರು ತಮ್ಮೊಂದಿಗೆ ಮಾತುಕತೆಗೆ ಬರಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ತಿಳಿಸಿದರು.

ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವ ಕುರಿತು ಸರ್ಕಾರಕ್ಕೆ ಆಸಕ್ತಿಯಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು, ಸಾಹಿತಿಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ಯುವುದಾಗಿ ಕೃಷ್ಣ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮುಂದಿನ ಸಮ್ಮೇಳನ?

2004ನೇ ಇಸವಿಯ ಜನವರಿ ತಿಂಗಳಲ್ಲಿ , ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆ ಮಂಡ್ಯದಲ್ಲಿ ನಡೆಯಲಿದ್ದು , ಈ ಸಭೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳವನ್ನು ನಿರ್ಣಯಿಸಲಾಗುವುದು.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷಧಿತ್ತು ಸಮ್ಮೇಳನದ ಆತಿಥ್ಯ ವಹಿಸಿಕೊಳ್ಳಲು ಉತ್ಸಾಹ ವ್ಯಕ್ತಪಡಿಸಿದ್ದು , ಜಿಲ್ಲೆಯ ರಾಜಕಾರಣಿಗಳು ಕೂಡ ಸಮ್ಮೇಳನ ನಡೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ಮುಂದಿನ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರಿನಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.


ಮುಖಪುಟ / ಮೂಡಬಿದಿರೆ ಸಾಹಿತ್ಯ ಸಮ್ಮೇಳನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X