ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಹನಿ ಹನಿ !
ಬಾಳೆಹೊನ್ನೂರು : ಚುಟುಕು ಪ್ರಿಯರ ವಾರ್ಷಿಕ ಸಮ್ಮೇಳನ ಚುಟುಕು ಸಾಹಿತ್ಯ ಸಮ್ಮೇಳನ ಈ ಬಾರಿ ಚಿಕ್ಕ ಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಮಾ. 14 ಮತ್ತು 15ರಂದು ನಡೆಯಲಿದೆ.
ಚುಟುಕು ರಚನೆಯಲ್ಲಿ ಎತ್ತಿದ ಕೈ ಎನಿಸಿರುವ ಜನಪ್ರಿಯ ಲೇಖಕ ಡಾ। ಸಿ.ಪಿ.ಕೆ. ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ, ಇದು 13ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ.
ಮಾ. 14 ರಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಪ್ರಾರಂಭವಾಗಲಿರುವ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕಾಸರಗೋಡಿನ ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ। ದೇಜಗೌ ಅವರು ಸಮ್ಮೇಳನದ ಧ್ವಜಾರೋಹಣ ಮಾಡುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉಪ ನಿರ್ದೇಶಕ ಡಾ। ಮಂಜಪ್ಪ ಶೆಟ್ಟಿ ಸಮಾರೋಪ ಭಾಷಣ ಮಾಡುವರು.
ಇದೇ ಸಂದರ್ಭದಲ್ಲಿ ಹಿರಿಯ ಚುಟುಕು ಸಾಹಿತಿ ಡಾ। ಎಂ. ಅಕಬರ ಆಲಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡುವರು.
ಚುಟುಕು ಶ್ರೀ ಸ್ಪರ್ಧೆ : ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಾರ್ಚ್ 15 ರಂದು ಚುಟುಕು ಸ್ಪರ್ಧೆ (ಹನಿಗವನ ವಾಚನ) ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2000 ರುಪಾಯಿ ನಗದು ಹಾಗೂ ‘ಚುಟುಕು ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸುಮಾರು 2000 ಚುಟುಕು ಕವಿಗಳು ಈ ಸ್ಪರ್ಧಾಗೋಷ್ಠಿಯಲ್ಲಿ ಭಾಗವಹಿಸಲಿದ್ದು - ಹಿರೇಮಗಳೂರು ಕಣ್ಣನ್ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
(ಇನ್ಫೋ ವಾರ್ತೆ)
ಚುಟುಕು
ಗುಟುಕು
ಮುಖಪುಟ
/
ಸಾಹಿತ್ಯ
ಸೊಗಡು