ಗುರೂಜಿ ರವಿಶಂಕರ್ ಬೆನ್ನು ತಟ್ಟಿದ ಕಂಚಿ ಸ್ವಾಮೀಜಿವಿಶ್ವ ಶಾಂತಿಗಾಗಿ ವೇದ ಯಜ್ಞ ದುರ್ಗಾ ಹೋಮಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವಿಶ್ವ ಆಧ್ಯಾತ್ಮಿಕ ಸಮ್ಮೇಳನಕ್ಕೆ ಶುಕ್ರವಾರದಂದು ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮಿಗಳು ಬಂದಿದ್ದರು. ಬಾಬರಿ ಮಸೀದಿ ಮತ್ತು ರಾಮಮಂದಿರ ವಿವಾದದ ಬಗ್ಗೆ ಸಮನ್ವಯಕಾರರಂತೆ ಮಾತನಾಡಿದ ಶ್ರೀಗಳು ಬಾಬರಿ ಮಸೀದಿ ಸಮಿತಿ ಹಾಗೂ ವಿಹೆಚ್ಪಿಯ ನಡುವೆ ಸಂಧಾನ ಸಭೆಯಾಂದನ್ನು ಆಯೋಜಿಸುವಂತೆ ಪ್ರಧಾನಿ ವಾಜಪೇಯಿ ಅವರಿಗೆ ಸಲಹೆ ಮಾಡುವುದಾಗಿ ತಿಳಿಸಿದರು. ಅವರು ಆಧ್ಯಾತ್ಮದ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.ಆಧ್ಯಾತ್ಮಿಕ ಸಮ್ಮೇಳನ ಆಯೋಜಿಸಿದ ಆರ್ಟ್ ಆಫ್ ಲಿವಿಂಗ್ನ ಪ್ರಯತ್ನವನ್ನು ಶ್ಲಾಘಿಸಿದ ಸ್ವಾಮೀಜಿ , ರವಿಶಂಕರ್ ಅವರು ಭಕ್ತಿ ಮತ್ತು ಯೋಗವನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಲಿಯುಗದಲ್ಲಿ ಭಕ್ತಿ ಯೋಗ ಮತ್ತು ಜಪದ ಮೂಲಕ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಹೊಸದಾಗಿ ಉದ್ಘಾಟನೆಯಾದ ವಿಶಾಲಾಕ್ಷಿ ಮಂಟಪದಲ್ಲಿ ಲೋಕೋದ್ಧಾರಕ್ಕಾಗಿ ಜಪ ತಪಗಳು, ಯೋಗ ಸಾಧನೆಗಳು ಸದಾ ಕಾಲ ನಡೆಯುತ್ತಿರಲಿ. ಜನರು ಸತ್ಸಂಗದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆಯುತ್ತಿರಲಿ ಎಂದು ಹಾರೈಸಿದರು. ತಿರುಚಿ ಶಿವರತ್ನಪುರಿ ಸ್ವಾಮೀಜಿ ಮತ್ತು ರವಿಶಂಕರ್ ಅವರ ನಡುವಿನ ಸಂಬಂಧವನ್ನು ಪರಮಾತ್ಮ ಮತ್ತು ಜೀವಾತ್ಮನಿಗೆ ಹೋಲಿಸಿದ ಸ್ವಾಮೀಜಿ ರವಿಶಂಕರ್ ಅವರ ಸಾಧನೆಯನ್ನು ಮತ್ತೊಮ್ಮೆ ಹೊಗಳಿದರು. ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ವಿಶ್ವ ಶಾಂತಿಗಾಗಿ ನಡೆದ ವೇದ ಯಜ್ಞ ದುರ್ಗಾ ಹೋಮದೊಂದಿಗೆ ಮುಕ್ತಾಯವಾಯಿತು. ಜಗತ್ತಿನಾದ್ಯಂತದಿಂದ ಸಾವಿರಾರು ಮಂದಿ ಭಕ್ತರು ಯಜ್ಞಕ್ಕಾಗಿ ಆಗಮಿಸಿದ್ದರು.ದೇಶದ ಹಲವೆಡೆಗಳಿಂದ ಬಂದ ಸ್ವಾಮೀಜಿಗಳು, ಸಾಧುಗಳು ಮತ್ತು ಸಂತರು ಆಧ್ಯಾತ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು. ಸತ್ಸಂಗ, ಭಜನೆ ಮತ್ತು ಸಂಗೀತದೊಂದಿಗೆ ಶುಕ್ರವಾರದ ಕಾರ್ಯಕ್ರಮಗಳು ಮುಕ್ತಾಯವಾದವು. (ಇನ್ಫೋ ವಾರ್ತೆ)Post Your Views
ಮುಖಪುಟ
-->ಸಾಹಿತ್ಯ
ಸೊಗಡು
-->ಆರ್ಟ್
ಆಫ್
ಲಿವಿಂಗ್
-->ವಿಚಾರಧಾರೆಜನವರಿ
18,
2003ಗುರೂಜಿ
ರವಿಶಂಕರ್
ಬೆನ್ನು
ತಟ್ಟಿದ
ಕಂಚಿ
ಸ್ವಾಮೀಜಿ
ವಿಶ್ವ
ಶಾಂತಿಗಾಗಿ
ವೇದ
ಯಜ್ಞ
ದುರ್ಗಾ
ಹೋಮಬೆಂಗಳೂರು:
ಆರ್ಟ್
ಆಫ್
ಲಿವಿಂಗ್
ಆಯೋಜಿಸಿರುವ
ವಿಶ್ವ
ಆಧ್ಯಾತ್ಮಿಕ
ಸಮ್ಮೇಳನಕ್ಕೆ
ಶುಕ್ರವಾರದಂದು
ಕಂಚಿ
ಕಾಮಕೋಟಿ
ಮಠದ
ಶಂಕರಾಚಾರ್ಯ
ಜಯೇಂದ್ರ
ಸರಸ್ವತಿ
ಸ್ವಾಮಿಗಳು
ಬಂದಿದ್ದರು.
ಬಾಬರಿ ಮಸೀದಿ ಮತ್ತು ರಾಮಮಂದಿರ ವಿವಾದದ ಬಗ್ಗೆ ಸಮನ್ವಯಕಾರರಂತೆ ಮಾತನಾಡಿದ ಶ್ರೀಗಳು ಬಾಬರಿ ಮಸೀದಿ ಸಮಿತಿ ಹಾಗೂ ವಿಹೆಚ್ಪಿಯ ನಡುವೆ ಸಂಧಾನ ಸಭೆಯಾಂದನ್ನು ಆಯೋಜಿಸುವಂತೆ ಪ್ರಧಾನಿ ವಾಜಪೇಯಿ ಅವರಿಗೆ ಸಲಹೆ ಮಾಡುವುದಾಗಿ ತಿಳಿಸಿದರು. ಅವರು ಆಧ್ಯಾತ್ಮದ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಆಧ್ಯಾತ್ಮಿಕ ಸಮ್ಮೇಳನ ಆಯೋಜಿಸಿದ ಆರ್ಟ್ ಆಫ್ ಲಿವಿಂಗ್ನ ಪ್ರಯತ್ನವನ್ನು ಶ್ಲಾಘಿಸಿದ ಸ್ವಾಮೀಜಿ , ರವಿಶಂಕರ್ ಅವರು ಭಕ್ತಿ ಮತ್ತು ಯೋಗವನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಲಿಯುಗದಲ್ಲಿ ಭಕ್ತಿ ಯೋಗ ಮತ್ತು ಜಪದ ಮೂಲಕ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಹೊಸದಾಗಿ ಉದ್ಘಾಟನೆಯಾದ ವಿಶಾಲಾಕ್ಷಿ ಮಂಟಪದಲ್ಲಿ ಲೋಕೋದ್ಧಾರಕ್ಕಾಗಿ ಜಪ ತಪಗಳು, ಯೋಗ ಸಾಧನೆಗಳು ಸದಾ ಕಾಲ ನಡೆಯುತ್ತಿರಲಿ. ಜನರು ಸತ್ಸಂಗದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆಯುತ್ತಿರಲಿ ಎಂದು ಹಾರೈಸಿದರು.
ತಿರುಚಿ ಶಿವರತ್ನಪುರಿ ಸ್ವಾಮೀಜಿ ಮತ್ತು ರವಿಶಂಕರ್ ಅವರ ನಡುವಿನ ಸಂಬಂಧವನ್ನು ಪರಮಾತ್ಮ ಮತ್ತು ಜೀವಾತ್ಮನಿಗೆ ಹೋಲಿಸಿದ ಸ್ವಾಮೀಜಿ ರವಿಶಂಕರ್ ಅವರ ಸಾಧನೆಯನ್ನು ಮತ್ತೊಮ್ಮೆ ಹೊಗಳಿದರು.
ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ವಿಶ್ವ ಶಾಂತಿಗಾಗಿ ನಡೆದ ವೇದ ಯಜ್ಞ ದುರ್ಗಾ ಹೋಮದೊಂದಿಗೆ ಮುಕ್ತಾಯವಾಯಿತು. ಜಗತ್ತಿನಾದ್ಯಂತದಿಂದ ಸಾವಿರಾರು ಮಂದಿ ಭಕ್ತರು ಯಜ್ಞಕ್ಕಾಗಿ ಆಗಮಿಸಿದ್ದರು.
ದೇಶದ ಹಲವೆಡೆಗಳಿಂದ ಬಂದ ಸ್ವಾಮೀಜಿಗಳು, ಸಾಧುಗಳು ಮತ್ತು ಸಂತರು ಆಧ್ಯಾತ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು. ಸತ್ಸಂಗ, ಭಜನೆ ಮತ್ತು ಸಂಗೀತದೊಂದಿಗೆ ಶುಕ್ರವಾರದ ಕಾರ್ಯಕ್ರಮಗಳು ಮುಕ್ತಾಯವಾದವು.
(ಇನ್ಫೋ ವಾರ್ತೆ)