ಸಿಲಿಕಾನ್ ಕಣಿವೆಯಲ್ಲಿ ಆಧ್ಯಾತ್ಮದ ಹೊಳೆಯಾ ನೀತಿಯ ಮಳೆಯಾ..ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಪ್ರಗತಿಗೆ ಅಗತ್ಯ ಮೌಲ್ಯಗಳ ಪುನರುತ್ಥಾನದ ಉದ್ದಿಶ್ಯದಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಸಮಾವೇಶ ಶುರುವಾಗಿದೆ. ಭಾರತದ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ವಿದೇಶೀ ಭಕ್ತರು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಈಗ ಠಿಕಾಣಿ ಹೂಡಿದ್ದಾರೆ.* ದಟ್ಸ್ ಕನ್ನಡ ಬ್ಯೂರೊಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ರಾಜ್ಯಪಾಲ ಟಿ.ಎನ್.ಚತುರ್ವೇದಿ ಉಪ ರಾಷ್ಟ್ರಪತಿ ಭೈರಾನ್ ಸಿಂಗ್ ಶೇಖಾವತ್ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಂಚಿ ಸ್ವಾಮಿ ಶಂಕರಾಚಾರ್ಯ ಅಲ್ಲಿಗೆ ಬರುತ್ತಾರೆ. ಬಂದು ಮಾತಿನ ಎರಕ ಹೊಯ್ಯುತ್ತಾರೆ. ಮಾತೇನಿದ್ದರೂ ಆಧ್ಯಾತ್ಮ ಹಾಗೂ ನೀತಿಯ ಸುತ್ತ. ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ- ಎಲ್ಲಕ್ಕೂ ಆಧ್ಯಾತ್ಮದ ಲೇಪ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ‘ವಿಶಾಲಾಕ್ಷಿ ಮಂಟಪ’ದಲ್ಲಿ ಗುರುವಾರ (ಜ.16) ಹಬ್ಬದ ವಾತಾವರಣ. ಇನ್ನು ಐದು ದಿನಗಳ ಕಾಲ ಇಲ್ಲಿ ಆಧ್ಯಾತ್ಮದ್ದೇ ಕಾರುಬಾರು. ಇದು ‘ಆಧ್ಯಾತ್ಮದ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳು’ ಎಂಬ ವಿಷಯ ಕುರಿತ ಜಾಗತಿಕ ಸಮಾವೇಶ. ಜಗದಗಲ ತಮ್ಮದೇ ಅನುಯಾಯಿ ಹಾಗೂ ಅಭಿಮಾನಿ ಬಳಗವನ್ನು ಕಂಡುಕೊಂಡಿರುವ ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಹೆಬ್ಬಯಕೆಯಂತೆ ಈಚೆಗಷ್ಟೆ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಬೆಂಗಳೂರಲ್ಲಿ ತಲೆಯೆತ್ತಿತು. ಈಗದು ಆಧ್ಯಾತ್ಮೋಪಾಸಕರಿಂದ ನಳನಳಿಸುತ್ತಿದೆ. ಅಲ್ಲಿ ಧ್ಯಾನಾಸಕ್ತ ದೇಶೀ- ವಿದೇಶೀ ರವಿಶಂಕರ್ ಭಕ್ತರು ಸಿಗುತ್ತಾರೆ. ಜಾಗತಿಕ ಸಮಾವೇಶದ ಸಿದ್ಧತೆಯ ಭರಾಟೆಯಲ್ಲಿ ಮುಳುಗಿರುವ ಶ್ರೀ ಶ್ರೀ ಮೀಡಿಯಾ ಸ್ಟಡೀಸ್ ಇನ್ಸ್ಟಿಟ್ಯೂಟ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆ. ನಾರಾಯಣ್ ಪ್ರಕಾರ, ‘ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳನ್ನು ಮೇಲೆತ್ತಲು ಅಗತ್ಯವಿರುವ ಸಮಸ್ಯೆ ನಿವಾರಕ ಅಂಶಗಳು ಸಮಾವೇಶದಲ್ಲಿ ಲಭಿಸಲಿವೆ. ಆಧ್ಯಾತ್ಮದ ತಳಹದಿಯಲ್ಲಿ ಏಳುವ ಸಾಮಾಜಿಕ ಕಟ್ಟಡ ಯಾವತ್ತೂ ಬಲು ಭದ್ರವಾಗಿರುತ್ತದೆ. ಸರ್ವತೋಮುಖ ಅಭಿವೃದ್ಧಿಕ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಪೂರಕವಾದವು. ಸಮಾವೇಶ ನಡೆಸುತ್ತಿರುವ ಉದ್ದೇಶ- ಮಸುಕಾಗಿರುವ ಈ ಮೌಲ್ಯಗಳ ಪುನರುತ್ಥಾನ.’ಜನವರಿ 18ನೇ ತಾರೀಕು ಉಪ ರಾಷ್ಟ್ರಪತಿ ಭೈರಾನ್ ಸಿಂಗ್ ಶೇಖಾವತ್ ಸಮಾವೇಶವನ್ನು ಅಧಿಕೃತವಾಗಿ ಉದ್ಘಾಟಿಸುವರು. ಈ ಉದ್ಘಾಟನೆ ರಿವಾಜಿಗೆ ಮಾತ್ರ. ವಾಸ್ತವದಲ್ಲಿ ವಿಶ್ವ ಶಾಂತಿ ಮಂತ್ರ ಪಠನದೊಂದಿಗೆ ಸಮಾವೇಶ ಜ. 16ಕ್ಕೇ ಶುರುವಾಗಿದೆ. ಜನವರಿ 18ನೇ ತಾರೀಕು ಮಧ್ಯ ಪ್ರದೇಶದ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ‘ಆಧ್ಯಾತ್ಮಿಕತೆ ಮತ್ತು ಸದೃಢ ಅಭಿವೃದ್ಧಿ’ ಎಂಬ ವಿಷಯ ಕುರಿತು ಮಾತಾಡುತ್ತಾರೆ. ಮರುದಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ‘ಆಧ್ಯಾತ್ಮಿಕತೆ ಮತ್ತು ವಿಜ್ಞಾನ’ ಎಂಬ ವಿಷಯದ ಬಗ್ಗೆ ತಮ್ಮ ವಿಚಾರ ಸರಣಿ ಮಂಡಿಸುತ್ತಾರೆ. ಸಮಾವೇಶಕ್ಕೆ ಹಾಜರಾಗುವ ಅಂತರರಾಷ್ಟ್ರೀಯ ಅತಿಥಿಗಳ ಯಾದಿಯಲ್ಲಿ ಬೋಟ್ಸ್ವಾನದ ಪ್ರಥಮ ಮಹಿಳೆ ಬಾರ್ಬರಾ ಮೊಗೇ ಮತ್ತು ಪೋಲೆಂಡ್ನ ಪ್ರಥಮ ಮಹಿಳೆ ಜೊಲಾಂಟ ಕ್ಲಓನಿಯೆವ್ಸ್ಕ ಇದ್ದಾರೆ. ವಸುದೈವ ಕುಟುಂಬಕಮ್ ಅನ್ನೋದು ಋಷಿ ಮುನಿಗಳ ನಂಬುಗೆಯಾಗಿತ್ತು. ಒಗ್ಗಟ್ಟೇ ಬಲಕಟ್ಟು ಅನ್ನುವ ನಾಣ್ಣುಡಿಯೂ ಇದನ್ನೇ ಹೇಳುತ್ತೆ. ಹಸನಾದ ಜೀವನದ ನೈಜ ಸತ್ಯವನ್ನು ಈಗ ಜನರಿಗೆ ಸಾರಿ ಹೇಳಬೇಕಾದ ಅನಿವಾರ್ಯತೆಯಿದೆ. ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಮೌಲ್ಯಗಳ ಪುನರುತ್ಥಾನ ಈ ಸಮಾವೇಶದ ಉದ್ದೇಶ. ಅದರಲ್ಲಿ ಯಶಸ್ವಿಯಾಗುತ್ತೇವೆಂಬ ನಂಬುಗೆ ನಮ್ಮದೆನ್ನುತ್ತಾರೆ ರವಿಶಂಕರ್.ನಿಮ್ಮ ದೃಷ್ಟಿಯಲ್ಲಿ ಆರ್ಟ್ ಆಫ್ ಲಿವಿಂಗ್ ಯಾವುದು? ಎರಡು ಸಾಲು ಬರೆಯಿರಿ.
ಮುಖಪುಟ
-->ಸಾಹಿತ್ಯ
ಸೊಗಡು
-->ಆರ್ಟ್
ಆಫ್
ಲಿವಿಂಗ್
-->ವಿಚಾರಧಾರೆಜನವರಿ
16,
2003ಸಿಲಿಕಾನ್
ಕಣಿವೆಯಲ್ಲಿ
ಆಧ್ಯಾತ್ಮದ
ಹೊಳೆಯಾ
ನೀತಿಯ
ಮಳೆಯಾ..
ಸಾಮಾಜಿಕ,
ಆಧ್ಯಾತ್ಮಿಕ
ಮತ್ತು
ಆರ್ಥಿಕ
ಪ್ರಗತಿಗೆ
ಅಗತ್ಯ
ಮೌಲ್ಯಗಳ
ಪುನರುತ್ಥಾನದ
ಉದ್ದಿಶ್ಯದಿಂದ
5
ದಿನಗಳ
ಕಾಲ
ಬೆಂಗಳೂರಲ್ಲಿ
ಅಂತರರಾಷ್ಟ್ರೀಯ
ಸಮಾವೇಶ
ಶುರುವಾಗಿದೆ.
ಭಾರತದ
ಅನೇಕ
ರಾಜ್ಯಗಳ
ಮುಖ್ಯಮಂತ್ರಿಗಳಿಂದ
ಹಿಡಿದು
ವಿವಿಧ
ವಿದೇಶೀ
ಭಕ್ತರು
ಕನಕಪುರ
ರಸ್ತೆಯ
ಆರ್ಟ್
ಆಫ್
ಲಿವಿಂಗ್
ಅಂತರರಾಷ್ಟ್ರೀಯ
ಕೇಂದ್ರದಲ್ಲಿ
ಈಗ
ಠಿಕಾಣಿ
ಹೂಡಿದ್ದಾರೆ.*
ದಟ್ಸ್
ಕನ್ನಡ
ಬ್ಯೂರೊ
ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ರಾಜ್ಯಪಾಲ ಟಿ.ಎನ್.ಚತುರ್ವೇದಿ ಉಪ ರಾಷ್ಟ್ರಪತಿ ಭೈರಾನ್ ಸಿಂಗ್ ಶೇಖಾವತ್ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಂಚಿ ಸ್ವಾಮಿ ಶಂಕರಾಚಾರ್ಯ ಅಲ್ಲಿಗೆ ಬರುತ್ತಾರೆ. ಬಂದು ಮಾತಿನ ಎರಕ ಹೊಯ್ಯುತ್ತಾರೆ. ಮಾತೇನಿದ್ದರೂ ಆಧ್ಯಾತ್ಮ ಹಾಗೂ ನೀತಿಯ ಸುತ್ತ. ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ- ಎಲ್ಲಕ್ಕೂ ಆಧ್ಯಾತ್ಮದ ಲೇಪ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ‘ವಿಶಾಲಾಕ್ಷಿ ಮಂಟಪ’ದಲ್ಲಿ ಗುರುವಾರ (ಜ.16) ಹಬ್ಬದ ವಾತಾವರಣ. ಇನ್ನು ಐದು ದಿನಗಳ ಕಾಲ ಇಲ್ಲಿ ಆಧ್ಯಾತ್ಮದ್ದೇ ಕಾರುಬಾರು. ಇದು ‘ಆಧ್ಯಾತ್ಮದ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳು’ ಎಂಬ ವಿಷಯ ಕುರಿತ ಜಾಗತಿಕ ಸಮಾವೇಶ.
ಜಗದಗಲ ತಮ್ಮದೇ ಅನುಯಾಯಿ ಹಾಗೂ ಅಭಿಮಾನಿ ಬಳಗವನ್ನು ಕಂಡುಕೊಂಡಿರುವ ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಹೆಬ್ಬಯಕೆಯಂತೆ ಈಚೆಗಷ್ಟೆ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಬೆಂಗಳೂರಲ್ಲಿ ತಲೆಯೆತ್ತಿತು. ಈಗದು ಆಧ್ಯಾತ್ಮೋಪಾಸಕರಿಂದ ನಳನಳಿಸುತ್ತಿದೆ. ಅಲ್ಲಿ ಧ್ಯಾನಾಸಕ್ತ ದೇಶೀ- ವಿದೇಶೀ ರವಿಶಂಕರ್ ಭಕ್ತರು ಸಿಗುತ್ತಾರೆ.
ಜಾಗತಿಕ ಸಮಾವೇಶದ ಸಿದ್ಧತೆಯ ಭರಾಟೆಯಲ್ಲಿ ಮುಳುಗಿರುವ ಶ್ರೀ ಶ್ರೀ ಮೀಡಿಯಾ ಸ್ಟಡೀಸ್ ಇನ್ಸ್ಟಿಟ್ಯೂಟ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆ. ನಾರಾಯಣ್ ಪ್ರಕಾರ, ‘ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳನ್ನು ಮೇಲೆತ್ತಲು ಅಗತ್ಯವಿರುವ ಸಮಸ್ಯೆ ನಿವಾರಕ ಅಂಶಗಳು ಸಮಾವೇಶದಲ್ಲಿ ಲಭಿಸಲಿವೆ. ಆಧ್ಯಾತ್ಮದ ತಳಹದಿಯಲ್ಲಿ ಏಳುವ ಸಾಮಾಜಿಕ ಕಟ್ಟಡ ಯಾವತ್ತೂ ಬಲು ಭದ್ರವಾಗಿರುತ್ತದೆ. ಸರ್ವತೋಮುಖ ಅಭಿವೃದ್ಧಿಕ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಪೂರಕವಾದವು. ಸಮಾವೇಶ ನಡೆಸುತ್ತಿರುವ ಉದ್ದೇಶ- ಮಸುಕಾಗಿರುವ ಈ ಮೌಲ್ಯಗಳ ಪುನರುತ್ಥಾನ.’
ಜನವರಿ 18ನೇ ತಾರೀಕು ಉಪ ರಾಷ್ಟ್ರಪತಿ ಭೈರಾನ್ ಸಿಂಗ್ ಶೇಖಾವತ್ ಸಮಾವೇಶವನ್ನು ಅಧಿಕೃತವಾಗಿ ಉದ್ಘಾಟಿಸುವರು. ಈ ಉದ್ಘಾಟನೆ ರಿವಾಜಿಗೆ ಮಾತ್ರ. ವಾಸ್ತವದಲ್ಲಿ ವಿಶ್ವ ಶಾಂತಿ ಮಂತ್ರ ಪಠನದೊಂದಿಗೆ ಸಮಾವೇಶ ಜ. 16ಕ್ಕೇ ಶುರುವಾಗಿದೆ. ಜನವರಿ 18ನೇ ತಾರೀಕು ಮಧ್ಯ ಪ್ರದೇಶದ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ‘ಆಧ್ಯಾತ್ಮಿಕತೆ ಮತ್ತು ಸದೃಢ ಅಭಿವೃದ್ಧಿ’ ಎಂಬ ವಿಷಯ ಕುರಿತು ಮಾತಾಡುತ್ತಾರೆ. ಮರುದಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ‘ಆಧ್ಯಾತ್ಮಿಕತೆ ಮತ್ತು ವಿಜ್ಞಾನ’ ಎಂಬ ವಿಷಯದ ಬಗ್ಗೆ ತಮ್ಮ ವಿಚಾರ ಸರಣಿ ಮಂಡಿಸುತ್ತಾರೆ.
ಸಮಾವೇಶಕ್ಕೆ ಹಾಜರಾಗುವ ಅಂತರರಾಷ್ಟ್ರೀಯ ಅತಿಥಿಗಳ ಯಾದಿಯಲ್ಲಿ ಬೋಟ್ಸ್ವಾನದ ಪ್ರಥಮ ಮಹಿಳೆ ಬಾರ್ಬರಾ ಮೊಗೇ ಮತ್ತು ಪೋಲೆಂಡ್ನ ಪ್ರಥಮ ಮಹಿಳೆ ಜೊಲಾಂಟ ಕ್ಲಓನಿಯೆವ್ಸ್ಕ ಇದ್ದಾರೆ.
ವಸುದೈವ ಕುಟುಂಬಕಮ್ ಅನ್ನೋದು ಋಷಿ ಮುನಿಗಳ ನಂಬುಗೆಯಾಗಿತ್ತು. ಒಗ್ಗಟ್ಟೇ ಬಲಕಟ್ಟು ಅನ್ನುವ ನಾಣ್ಣುಡಿಯೂ ಇದನ್ನೇ ಹೇಳುತ್ತೆ. ಹಸನಾದ ಜೀವನದ ನೈಜ ಸತ್ಯವನ್ನು ಈಗ ಜನರಿಗೆ ಸಾರಿ ಹೇಳಬೇಕಾದ ಅನಿವಾರ್ಯತೆಯಿದೆ. ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಮೌಲ್ಯಗಳ ಪುನರುತ್ಥಾನ ಈ ಸಮಾವೇಶದ ಉದ್ದೇಶ. ಅದರಲ್ಲಿ ಯಶಸ್ವಿಯಾಗುತ್ತೇವೆಂಬ ನಂಬುಗೆ ನಮ್ಮದೆನ್ನುತ್ತಾರೆ ರವಿಶಂಕರ್.
ನಿಮ್ಮ ದೃಷ್ಟಿಯಲ್ಲಿ ಆರ್ಟ್ ಆಫ್ ಲಿವಿಂಗ್ ಯಾವುದು? ಎರಡು ಸಾಲು ಬರೆಯಿರಿ.