ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ.ನಾಗೇಂದ್ರ ಅವರ ಸ್ಮರಣೆ‘ಸಪ್ತಸ್ವರ ಸಂಗೀತ ಸಂಜೆ’

By Staff
|
Google Oneindia Kannada News

ಜನಪ್ರಿಯ ಸಿನಿಮಾ ಸಂಗೀತ ನಿರ್ದೇಶಕ ದಿವಂಗತ ನಾಗೇಂದ್ರ ಅವರ ಸ್ಮರಣಾರ್ಥ ಫೆಬ್ರವರಿ 11 ರಂದು ‘ಸಪ್ತಸ್ವರ ಸಂಗೀತ ಸಂಜೆ’ ಏರ್ಪಾಡಾಗಿದೆ.

ಬೆಂಗಳೂರಿನ ಸಪ್ತಸ್ವರ ಚಾರಿಟಬಲ್‌ ಅಂಡ್‌ ಎಜುಕೇಷನಲ್‌ ಟ್ರಸ್ಟ್‌ ಆಯೋಜಿಸಿರುವ ಈ ಸಂಗೀತ ಸಂಜೆ ಮಂಗಳವಾರ ಸಂಜೆ 5.30 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಚಲನಚಿತ್ರ ನಟನಟಿಯರು, ಸಂಗೀತ ನಿರ್ದೇಶಕರು, ಖ್ಯಾತ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸಿ.ಸೋಮಶೇಖರ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಸಂಗೀತ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಐಪಿಎಸ್‌ ಅಧಿಕಾರಿ ಸುಭಾಷ್‌ ಭರಣಿ ನೆನಪಿನ ಸಂಚಿಕೆ ಬಿಡುಗಡೆ ಹಾಗೂ ಶಾಸಕ ಪಿಜಿಆರ್‌ ಸಿಂಧ್ಯಾ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿಸುವರು.

ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖಾ, ಕಲಾವಿದರಾದ ಶಿವರಾಂ, ರಾಮಕೃಷ್ಣ , ನರೇಂದ್ರಬಾಬು, ರಾಜೇಶ್‌ ಕೃಷ್ಣನ್‌, ವಿಷ್ಣು , ಬದರಿಪ್ರಸಾದ್‌, ಶಮಿತ, ಚಂದ್ರಿಕಾ ಗುರುರಾಜ್‌, ಮಂಗಳ ಮತ್ತಿತರರರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ 080-3214206 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X