ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಎಸ್‌.ಅಮೂರರಿಗೆ ಅನಕೃ ನಿರ್ಮಾಣ್‌ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು: ಈ ವರ್ಷದ ಅನಕೃ ನಿರ್ಮಾಣ್‌ ಪ್ರಶಸ್ತಿಗೆ ಖ್ಯಾತ ವಿಮರ್ಶಕ ಡಾ. ಜಿ. ಎಸ್‌. ಅಮೂರ ಆಯ್ಕೆಯಾಗಿದ್ದಾರೆ.

ಜಿ. ಎಸ್‌. ಅಮೂರ, ಬೇಂದ್ರೆಯವರ ಕಾವ್ಯದ ಕುರಿತು ಬರೆದಿರುವ ಭುವನ ಭಾಗ್ಯ ವಿಮರ್ಶಾ ಕೃತಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದೇ ಕೃತಿಗಾಗಿ ಅಮೂರರಿಗೆ ಅನಕೃ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ಚಿನ್ನದ ಫಲಕ, ಅಭಿನಂದನಾ ಪತ್ರ, ಹಾಗೂ 25, 001 ರೂಪಾಯಿ ನಗದನ್ನೊಳಗೊಂಡಿದೆ.

ಏಪ್ರಿಲ್‌ 27ರಂದು ಗಾಯನ ಸಮಾಜದಲ್ಲಿ ನಡೆಯುವ ಸಮಾರಂಭದಲ್ಲಿ ಅಮೂರರಿಗೆ ಅನಕೃ ನಿರ್ಮಾಣ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನಕೃ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X