ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಹಿತ್ಯ ಸಮ್ಮೇಳನಕ್ಕೆ ಮಳೆರಾಯ ಒಲ್ಲದ ಅತಿಥಿ !
ಬೆಳಗಾವಿ: ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೆಂಡಾಲ್ ಏರಿಸುವ ಸಿದ್ಧತೆಗಳು ಭರದಿಂದ ಸಾಗುತ್ತಿರುವಂತೆಯೇ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣ ಇದ್ದು ಮಳೆಯ ಆತಂಕ ಹೆಚ್ಚಾಗಿದೆ.
ಸಮ್ಮೇಳನ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 20 ಸಾವಿರ ಜನ ಪ್ರತಿನಿಧಿಗಳು ಕುಳಿತುಕೊಳ್ಳಲು ಅನುಕೂಲ ಇರುವ ಪೆಂಡಾಲ್ ಸಿದ್ಧಪಡಿಸಲಾಗುತ್ತಿದೆ. ಕಳೆದೆರಡು ದಿನಗಳಿಂದ ನಗರದಲ್ಲಿ ವಿಪರೀತ ಸೆಕೆಯಿದ್ದು ಮೋಡ ಮುಸುಕಿಕೊಂಡಿದೆ. ಮಾರ್ಚ್ 7ರ ಶುಕ್ರವಾರ ಸಂಜೆ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಾಕಷ್ಟು ಮಳೆಯಾಗಿರುವುದರಿಂದ ಸಂಘಟಕರಿಗೆ ಮತ್ತಷ್ಟು ಆತಂಕವಾಗಿದೆ.
ಮಳೆಯ
ನಡುವೆ
ಸಾಗಿರುವ
ತಯಾರಿ
:
- ನಗರದಾದ್ಯಂತ ಈಗಾಗಲೇ ನಾಲ್ಕು ಆಟೋ ರಿಕ್ಷಾಗಳಲ್ಲಿ ಸಮ್ಮೇಳನದ ಪ್ರಚಾರ ಕಾರ್ಯ ಆರಂಭವಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಕಲೆ ಜಾನಪದ ಪ್ರತಿಬಿಂಬಿಸುವ 10 ರೂಪಕಗಳನ್ನು ಶಿಕ್ಷಣ ಇಲಾಖೆಯು ವ್ಯವಸ್ಥೆಗೊಳಿಸುತ್ತಿದೆ.
- ಚಿಕ್ಕೋಡಿ ತಾಲ್ಲೂಕಿನ ಆಡಿಯ ಗಿರಿಮಠದಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಠಾಧಿಪತಿಗಳ ನೇತೃತ್ವದಲ್ಲಿ ಗಡಿನಾಡ ಜ್ಯೋತಿಪಾದ ನಡೆಯುವುದು.
- ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಪಾದಯಾತ್ರೆ ಉದ್ಘಾಟಿಸುವರು. ಮಾರ್ಚ್ 5 ರಂದು ಪ್ರಾರಂಭವಾಗುವ ಪಾದಯಾತ್ರೆ ಮಾರ್ಚ್ 7ರಂದು ಸಮ್ಮೇಳನ ಸಭಾಂಗಣ ತಲುಪಲಿದೆ.
Story first published: Wednesday, March 5, 2003, 5:30 [IST]