ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾ.ಶಿ.ಮರುಳಯ್ಯನವರ ಹುಟ್ಟು ಹಬ್ಬದ ಸಂಭ್ರಮಕ್ಕೆ ಜೊತೆಯಾದ ಕಸಾಪ

By Staff
|
Google Oneindia Kannada News

KaSaPa to celebrate Sa.Shi.Marulayyas birthday by singing his own songs!ಬೆಂಗಳೂರು : ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ. ಸಾ. ಶಿ. ಮರುಳಯ್ಯ ಅವರ ಹುಟ್ಟುಹಬ್ಬವನ್ನು ಸಾಹಿತಿ ಸುದಿನ ಕಾರ್ಯಕ್ರಮದಡಿ ಜನವರಿ 28ರಂದು ಆಚರಿಸಲು ನಿರ್ಧರಿಸಿದೆ.

ಸಾ.ಶಿ. ಮರುಳಯ್ಯ ಅವರ ಕಾವ್ಯ ಸಾಹಿತ್ಯದ ಕುರಿತು ಕವಿ. ಪ್ರೊ. ದೊಡ್ಡ ರಂಗೇಗೌಡ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಇದೇ ಸಂದರ್ಭದಲ್ಲಿ ಸಾ. ಶಿ. ಮರುಳಯ್ಯ ಅವರೊಡನೆ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಡಾ. ಪಿ.ವಿ. ನಾರಾಯಣ, ಬೇಡರೆಡ್ಡಿ ಹಳ್ಳಿ ಪಂಪಣ್ಣ, ಕೆ.ಆರ್‌. ಇಕ್ಬಾಲ್‌ ಅಹಮದ್‌, ಪ್ರೇಮಾ ಭಟ್‌. ಡಾ. ವರದಾ ಶ್ರೀನಿವಾಸ್‌, ಜಯಮ್ಮ ಕರಿಯಣ್ಣ ಮುಂತಾದವರು ಸಂವಾದದಲ್ಲಿ ಭಾಗವಹಿಸುವರು.

ಗಾಯಕರಾದ ಯಶವಂತ ಹಳಬಂಡಿ, ಗಾಯತ್ರಿ ರಾಮಣ್ಣ, ನಾರಾಯಣರಾವ್‌ ಮೂನೆ, ಮಂಜುಳಾ ಶಿವಾನಂದ ಅವರು ಸಾಹಿತಿ ಸುದಿನದ ಅಂಗವಾಗಿ ಸಾ.ಶಿ. ಮರುಳಯ್ಯ ಅವರ ಗೀತೆಗಳಿಗೆ ಜೀವ ತುಂಬುವರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X