ಮುಂಬಯಿ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಗುರುರಾಜ ನಾಯಕ್
ಮುಂಬಯಿ : ಮಹಾನಗರದ ಅತ್ಯಂತ ಹಳೆಯ ಸಂಘಟನೆಯಾದ ಮುಂಬಯಿ ಕನ್ನಡ ಸಂಘದ 61ನೇ ವಾರ್ಷಿಕ ಮಹಾಸಭೆ ಡಾ. ಜಿ.ಡಿ. ಜೋಶಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಎರಡು ವರ್ಷದ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು.
ಕಳೆದ 28 ವರ್ಷಗಳಿಂದ ಸಂಘದ ಏಳಿಗೆಗೆ ದುಡಿದ ಗುರುರಾಜ್ ಎಸ್. ನಾಯಕ್ ಅವರು, ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ, ಬಿ. ನಾಗಭೂಷಣ್ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ವಿ. ಮೋಹನ್ ಮತ್ತು ವಿ.ವಿ. ಬಾಳಿಗಾರ ಉಪಾಧ್ಯಕ್ಷರಾಗಿ, ಗಾಯತ್ರಿ ರಾಮು ಸಹ ಕಾರ್ಯದರ್ಶಿಯಾಗಿ, ಪುರುಷೋತ್ತಮ್ ಖಜಾಂಚಿಯಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರು : ಸೋಮನಾಥ ಕರ್ಕೋರ, ರಾಜೇಂದ್ರ ಗಡಿಯಾರ್, ಎನ್.ಪಿ. ಸುವರ್ಣ, ವಸಂತ ಎನ್. ಒಡೆಯರ್, ಬಾಬುರಾಮ ಎಂ. ಪ್ರಭು, ಎಂ.ವಿ. ಜಯರಾಂ, ಉಮೇಶ್ ಬಿ. ಕೋಟ್ಯಾನ್, ಡಿ.ಆರ್. ರೇವಣಕರ್, ಜಿ.ಆರ್. ವಿಠಲ್, ಡಾ. ಕೆ. ರಘುನಾಥ್, ಮೀರಾ ಆರ್. ರಾವ್.
ಸುಮಾರು 65 ವರ್ಷಗಳಿಂದಲೂ ಕನ್ನಡ ಚಟುವಟಿಕೆಯಲ್ಲಿ ತೊಡಗಿರುವ ಮುಂಬಯಿ ಕನ್ನಡ ಸಂಘ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸುಮಾರು 12 ಸಾವಿರ ಉತ್ತಮ ಪುಸ್ತಕ ಭಂಡಾರ ಹಾಗೂ ಉಚಿತ ವಾಚನಾಲಯವೂ ಇಲ್ಲಿದೆ.
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು