ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾ.ಮಾ.ನಾಯಕರ ನೆನೆದ ಬೆಂಗಳೂರು ಮಹಾ ನಗರ ಪಾಲಿಕೆ!

By Staff
|
Google Oneindia Kannada News

ಬೆಂಗಳೂರು : ಮಹಾನಗರ ಪಾಲಿಕೆಯ ಈಶಾನ್ಯ ವಲಯ ಕಚೇರಿಗಳ ಮುಂಭಾಗದ ವೃತ್ತಕ್ಕೆ, ಕನ್ನಡದ ಪ್ರಸಿದ್ಧ ಅಂಕಣಕಾರ ಸಾಹಿತಿ ದಿವಂಗತ ಹಾ.ಮಾ.ನಾಯಕ ಅವರ ಹೆಸರನ್ನು ಸೋಮವಾರ ನಾಮಕರಣ ಮಾಡಲಾಯಿತು.

ಡಾ। ಹಾ.ಮಾ.ನಾಯಕ ವೃತ್ತವನ್ನು ಉಪ ಮೇಯರ್‌ ಆರ್‌. ಶಂಕರ್‌ ಉದ್ಘಾಟಿಸಿದರು. ಕನ್ನಡದ ಪ್ರಮುಖ ಸಾಹಿತಿಯಾಗಿದ್ದ ಹಾ.ಮಾ. ನಾಯಕರು ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಭಾಷೆ ಬಲಗೊಳ್ಳಬೇಕೆನ್ನುವ ಆಶಯವನ್ನು ಹಾ.ಮಾ.ನಾ. ಹೊಂದಿದ್ದರು ಎಂದು ಶಂಕರ್‌ ಹೇಳಿದರು.

ಡಾ. ಚಂದ್ರಶೇಖರ ಕಂಬಾರ, ಪಾಲಿಕೆಯ ತೆರಿಗೆ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮ್ತಾಜ್‌ ಬೇಗಂ, ಪಾಲಿಕೆ ಸದಸ್ಯ ಗುಣಶೇಖರ್‌, ಜನಪ್ರಿಯ ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X