ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಗೀತ ವಿದ್ವಾಂಸರ 32ನೇ ಸಮ್ಮೇಳನಾಧ್ಯಕ್ಷರಾಗಿ ಪಿ.ಜಿ.ಲಕ್ಷ್ಮೀನಾರಾಯಣ
ಬೆಂಗಳೂರು : ಬರುವ ಮಾರ್ಚ್ 6ರಿಂದ ಪ್ರಾರಂಭವಾಗಲಿರುವ ಗಾನಕಲಾ ಪರಿಷತ್ನ 32ನೇ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷರಾಗಿ ಪಿ.ಜಿ.ಲಕ್ಷ್ಮೀನಾರಾಯಣ ಅವರನ್ನು ಆರಿಸಲಾಗಿದೆ.
ಕರ್ನಾಟಕ ಗಾನಕಲಾ ಪರಿಷತ್ ಈ ವಿಷಯ ತಿಳಿಸಿದೆ. 5 ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಂಗೀತ ವಿದ್ವಾಂಸರು ಭಾಗವಹಿಸಲಿದ್ದಾರೆ. ಪಿ.ಜಿ.ಲಕ್ಷ್ಮೀನಾರಾಯಣ ಲಯ ವಾದ್ಯಗಾರರಾಗಿ ಹೆಸರು ಮಾಡಿದವರು. ಅವರ ಸಾಧನೆಗೆ ಗೌರವ ಸಲ್ಲಿಸುವ ಉದ್ದಿಶ್ಯದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಅವರನ್ನು ಆರಿಸಲಾಗಿದೆ ಎಂದು ಪರಿಷತ್ತು ಹೇಳಿದೆ.
ಪ್ರಸಕ್ತ ಸಾಲಿನ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಅಧ್ಯಕ್ಷರನ್ನಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಆರ್.ಕೆ.ಪದ್ಮನಾಭ ಅವರನ್ನು ಆಯ್ಕೆ ಮಾಡಲಾಗಿದೆ.
(ಇನ್ಫೋ ವಾರ್ತೆ)
Comments
Story first published: Friday, May 17, 2002, 5:30 [IST]