ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ವಿದ್ವಾಂಸರ 32ನೇ ಸಮ್ಮೇಳನಾಧ್ಯಕ್ಷರಾಗಿ ಪಿ.ಜಿ.ಲಕ್ಷ್ಮೀನಾರಾಯಣ

By Staff
|
Google Oneindia Kannada News

ಬೆಂಗಳೂರು : ಬರುವ ಮಾರ್ಚ್‌ 6ರಿಂದ ಪ್ರಾರಂಭವಾಗಲಿರುವ ಗಾನಕಲಾ ಪರಿಷತ್‌ನ 32ನೇ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷರಾಗಿ ಪಿ.ಜಿ.ಲಕ್ಷ್ಮೀನಾರಾಯಣ ಅವರನ್ನು ಆರಿಸಲಾಗಿದೆ.

ಕರ್ನಾಟಕ ಗಾನಕಲಾ ಪರಿಷತ್‌ ಈ ವಿಷಯ ತಿಳಿಸಿದೆ. 5 ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಂಗೀತ ವಿದ್ವಾಂಸರು ಭಾಗವಹಿಸಲಿದ್ದಾರೆ. ಪಿ.ಜಿ.ಲಕ್ಷ್ಮೀನಾರಾಯಣ ಲಯ ವಾದ್ಯಗಾರರಾಗಿ ಹೆಸರು ಮಾಡಿದವರು. ಅವರ ಸಾಧನೆಗೆ ಗೌರವ ಸಲ್ಲಿಸುವ ಉದ್ದಿಶ್ಯದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಅವರನ್ನು ಆರಿಸಲಾಗಿದೆ ಎಂದು ಪರಿಷತ್ತು ಹೇಳಿದೆ.

ಪ್ರಸಕ್ತ ಸಾಲಿನ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಅಧ್ಯಕ್ಷರನ್ನಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಆರ್‌.ಕೆ.ಪದ್ಮನಾಭ ಅವರನ್ನು ಆಯ್ಕೆ ಮಾಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X