ಮಾ.29 ರಿಂದ ಕನ್ನಡ - ಬ್ರಿಟನ್ ರಂಗಭೂಮಿ ಮುಖಾಮುಖಿ
ಬೆಂಗಳೂರು : ಬ್ರಿಟನ್ನಿಂದ ಆಗಮಿಸಿರುವ ಮೂವರು ರಂಗಕರ್ಮಿಗಳು ಮಾರ್ಚ್ 29 ರಿಂದ ಮೂರು ದಿನಗಳ ಕಾಲ ಕರ್ನಾಟಕದ ರಂಗಭೂಮಿಯ ಬಗ್ಗೆ ಕೆಲವು ವಿವರಗಳನ್ನು ಹೆಕ್ಕಲು ಮುಂದಾಗಿದ್ದಾರೆ. ಈ ಅಧ್ಯಯನದಲ್ಲಿ ಬ್ರಿಟನ್ ರಂಗಕರ್ಮಿಗಳೊಂದಿಗೆ ಬೆಂಗಳೂರಿನ ಸ್ಪಂದನ ತಂಡ ಜೊತೆಯಾಗಿದೆ. ಅಂದಹಾಗೆ, ಭಾರತದ ರಂಗಭೂಮಿಯ ಅಧ್ಯಯನ ತಂಡದ ಉದ್ದೇಶ.
ಏಷ್ಯಾದ ಅತಿದೊಡ್ಡ ಬಡಾವಣೆ ಎಂದು ಹೆಸರಾಗಿರುವ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಅಧ್ಯಯನ ಸಂಬಂಧ ವಿಚಾರ ವಿನಿಮಯ ನಡೆಯಲಿದೆ. ಈ ಕಾರ್ಯಕ್ರಮವನ್ನು ಸ್ಪಂದನ ಆಯಾೕೕಜಿಸಿದೆ ಎಂದು ಹಿರಿಯ ರಂಗನಟಿ, ನಿರ್ದೇಶಕಿ ಬಿ. ಜಯಶ್ರೀ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ರಂಗಭೂಮಿಯಾಂದಿಗೆ ನಂಟು ಹೊಂದಿರುವ ಕನ್ನಡದ ಹಲವಾರು ಅನುಭವಿಗಳು ಭಾಗವಹಿಸುವರು. ಭಾರತೀಯ ಸಂಸ್ಕೃತಿ ಹಾಗೂ ರಂಗಭೂಮಿ ಬಗ್ಗೆ ಜಿ.ಕೆ. ಗೋವಿಂದರಾವ್ ಮಾತನಾಡಿದರೆ, ರಂಗಭೂಮಿ ಹಾಗೂ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನೃತ್ಯ ಕುರಿತು ಪದ್ಮಿನಿ ರವಿ ಮಾಹಿತಿ ನೀಡುವರು. ವಸ್ತ್ರ ವಿನ್ಯಾಸ, ಬೆಳಕು, ಸೆಟ್ ಕುರಿತಂತೆ ಎಂ.ಎಸ್. ಸತ್ಯು, ರಂಗಸಂಗೀತ ಕುರಿತಂತೆ ಸಿ. ಅಶ್ವಥ್, ನಾಟಕ ದೃಶ್ಯ ಮತ್ತು ಸನ್ನಿವೇಶ ಪ್ರಾತ್ಯಕ್ಷಿಕೆ ಕುರಿತಂತೆ ಬಿ.ಜಯಶ್ರೀ ಮತ್ತು ಜನಪದ ರಂಗಭೂಮಿ ಕುರಿತಂತೆ ಡಾ. ಚಂದ್ರಶೇಖರ ಕಂಬಾರ ಮಾಹಿತಿ ನೀಡುವರು.
(ಇನ್ಫೋ ವಾರ್ತೆ)