ಬಂಡಾಯಕ್ಕೆ ಎಳ್ಳುನೀರು: ಪುನರೂರು ಜೊತೆ ಚಂಪಾ ರಾಜಿ !
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರ ಚುನಾವಣೆಯಲ್ಲಿ ಹರಿಕೃಷ್ಣ ಪುನರೂರು ವಿರುದ್ಧ ಸ್ಪರ್ಧಿಸಿ ಚುನಾವಣೆಗೆ ರಂಗು ಮೂಡಿಸಿದ್ದ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಉರುಫ್ ಚಂಪಾ ಅವರ ಬಂಡಾಯ ಈಗ ತಣ್ಣಗಾಗಿದೆ. ಪರಿಷತ್ತಿನ ತೇರು ಎಳೆಯಲು ಸಾಹಿತಿಗಳೇ ಆಗಬೇಕು ಎನ್ನುವ ಅವರ ನಿಲುವಿನಲ್ಲೂ ಬದಲಾವಣೆಯಾಗಿದೆ. ಆ ಕಾರಣದಿಂದಲೇ ಚಂಪಾ ಈಗ ಪುನರೂರು ಜೊತೆ ಇದ್ದಾರೆ.
ಚಂಪಾ ಅವರ ಬಂಡಾಯ ತಣ್ಣಗಾದ ವಿಷಯವನ್ನು ಬಹಿರಂಗಪಡಿಸಿದ್ದು ಸ್ವತಃ ಪುನರೂರು. ‘ಚಂಪಾ ಅವರ ಬಂಡಾಯವೆಲ್ಲ ಈಗ ನಿಂತುಹೋಗಿದೆ. ಅವರೀಗ ನಮ್ಮ ಜೊತೆ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕಲ್ಲ ’ - ಎಂದು ಉಡುಪಿಯಲ್ಲಿ ಇತ್ತೀಚೆಗೆ ನಡೆದ ಬನ್ನಂಜೆ ಗೋವಿಂದಾಚಾರ್ಯರ ಸನ್ಮಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಕೃಷ್ಣ ಪುನರೂರು ಮಾರ್ಮಿಕವಾಗಿ ಹೇಳಿದರು.
ಕನ್ನಡ
ಸಾಹಿತ್ಯ
ಪರಿಷತ್ತಿನಲ್ಲಿ
ಕೆಲವು
ಬದಲಾವಣೆಗಳನ್ನು
ತರಲು
ಉದ್ದೇಶಿಸಿರುವುದಾಗಿ
ಪುನರೂರು
ತಿಳಿಸಿದರು.
ಅವರ
ಯೋಜನೆಯ
ಪ್ರಕಾರ-
- ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಗಳ ಹುದ್ದೆಗೆ ಮಹಿಳಾ ಮೀಸಲಾತಿ ಜಾರಿಗೆ ತರಲಾಗುವುದು.
- ಪ್ರಸ್ತುತ ಮೂರು ವರ್ಷಕ್ಕೊಮ್ಮೆ ನಡೆಯುವ ಪರಿಷತ್ತಿನ ಚುನಾವಣೆಯ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸುವುದು.
- ತಾಲ್ಲೂಕು ಕಸಾಪ ಸಮಿತಿಗೂ ಚುನಾವಣೆ ನಡೆಸುವುದು.
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು