ಹೊಯ್ಸಳ ಕನ್ನಡ ಸಂಸ್ಥೆ ರಾಜ್ಯೋತ್ಸವದಲ್ಲಿ ಹರಿ ದಂಪತಿ
*ಮಾಹಿತಿ : ಮಾನುಷ (ಕುಸುಮ)
ಮೈಸೂರು : ಭಾಷೆಯ ಬಗ್ಗೆ ಅಭಿಮಾನವಿರಬೇಕೇ ಹೊರತು ದುರಭಿಮಾನವಾಗಲೀ ಅಥವಾ ನಿರಭಿಮಾನವಾಗಲೀ ಇರಬಾರದು. ಕನ್ನಡವನ್ನು ಗೌರವಿಸುವಂತೆಯೇ ಇತರ ಭಾಷೆಗಳನ್ನೂ ಗೌರವಿಸುವ ಮನೋಧರ್ಮ ನಮ್ಮದಾಗಬೇಕು ಎಂದು ಹಿರಿಯ ಲೇಖಕ ಎಸ್.ಕೆ.ಹರಿಹರೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಇಡೀ ದೇಶದಲ್ಲಿ ಭಾಷಾಭಿಮಾನದಿಂದ ರಾಜ್ಯೋತ್ಸವವನ್ನು ಆಚರಿಸುವುದು ಕರ್ನಾಟಕದಲ್ಲಿ ಮಾತ್ರ. ಇಂಥ ಉತ್ಸವ ಕಾರ್ಯಕ್ರಮಗಳು ಬೇರಾವ ರಾಜ್ಯದಲ್ಲೂ ಕಂಡು ಬರುವುದಿಲ್ಲ ಎಂದು ಮೈಸೂರಿನ ಹೊಯ್ಸಳ ಕನ್ನಡ ಸಂಘ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ನ.ನಾಗಲಿಂಗಸ್ವಾಮಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಹರಿಹರೇಶ್ವರ ಹೇಳಿದರು.
ಹೊಯ್ಸಳ ಕನ್ನಡ ಸಂಸ್ಥೆ ಏರ್ಪಡಿಸಿದ್ದ ಕನ್ನಡ ಕವಿಗೋಷ್ಠಿ ಕುರಿತು ಮಾತನಾಡಿದ ಹರಿಹರೇಶ್ವರ ಅವರು- ಪ್ರಾಸದಿಂದಷ್ಟೇ ಕವಿತೆ ಸಾಧ್ಯವಾಗುವುದಿಲ್ಲ . ಕವಿತೆಯಲ್ಲಿ ಭಾಷಾ ಶುದ್ಧಿಯಿರಬೇಕು ಮತ್ತು ಛಂದೋಬದ್ಧತೆ ಇರಬೇಕು ಎಂದು ಯುವಕವಿಗಳಿಗೆ ಕಿವಿ ಮಾತು ಹೇಳಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 30 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಕಲಿಯೋಣ,
ಸಂಸ್ಕೃತಿ
ಬೆಳೆಸೋಣ
ನಮ್ಮದೇ
ಆದ
ಸಂಸ್ಕೃತಿಯಿದ್ದರೂ,
ಸಮಯಪ್ರಜ್ಞೆಯಂಥ
ಪಾಶ್ಚಾತ್ಯ
ಗುಣಗಳನ್ನು
ಕಲಿತು
ಅಳವಡಿಸಿಕೊಂಡರೆ
ಕಾರ್ಯಕ್ರಮಗಳ
ಮೆರುಗು
ಇನ್ನಷ್ಟು
ಹೆಚ್ಚುತ್ತದೆ
ಎಂದು
ಕಾರ್ಯಕ್ರಮವನ್ನು
ಉದ್ಘಾಟಿಸಿದ
ಅಮೆರಿಕನ್ನಡ
ಪತ್ರಿಕೆಯ
ಪ್ರಕಾಶಕಿ,
ಲೇಖಕಿ
ನಾಗಲಕ್ಷ್ಮಿ
ಹರಿಹರೇಶ್ವರ
ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ
ರಾಜಧಾನಿ
ಮೈಸೂರಿನ
ಹೆಸರು
ಸಾರ್ಥಕಗೊಳಿಸುವ
ರಚನಾತ್ಮಕ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬೇಕಾದ
ಅಗತ್ಯತೆಯನ್ನು
ಅವರು
ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸನ್ನದು ಲೆಕ್ಕಿಗ ಎಸ್.ಅಚ್ಚುತ ಅವರು ಹೊಯ್ಸಳ ಕನ್ನಡ ಸಂಸ್ಥೆಯ ಕನ್ನಡ ಕಾಂಚಾಣ ನಿಧಿಯನ್ನು ಉದ್ಘಾಟಿಸಿದರು. ಸಂಸ್ಥೆಯ ಸಂಚಾಲಕ ಎಂ.ಆರ್.ರಂಗಣ್ಣ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.