ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಪರಿಷತ್ತಿನ ಅಮೃತನಿಧಿ ಚೀಟಿಗಳ ದುಡ್ಡು ಏನಾಯಿತು?

By Staff
|
Google Oneindia Kannada News

ಬೆಂಗಳೂರು : ಲೆಕ್ಕ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದ ಮತ್ತು ಅಮೃತ ನಿಧಿ ಚೀಟಿಗಳ ಹಣವನ್ನು ಹಿಂತಿರುಗಿಸದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಮಾಜಿ ಮತ್ತು ಹಾಲಿ ಅಧ್ಯಕ್ಷರುಗಳಿಗೆ ಕನ್ನಡ ಸಾಹಿತ್ಯ ಪರಿಷತ್‌ ನೋಟಿಸ್‌ ಜಾರಿಗೊಳಿಸಿದೆ.

ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್‌ ಇಂತಹ ಕ್ರಮವನ್ನು ಕೈಗೊಂಡಿದ್ದು, ಸಾಲ ರೂಪದಲ್ಲಿ ಪಡೆದ ಪುಸ್ತಕಗಳಿಗೆ ಹಣ ನೀಡದೇ ಇರುವ ವ್ಯಾಪಾರಿಗಳಿಗೆ, ವ್ಯಕ್ತಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ನೋಟಿಸ್‌ ನೀಡಿದೆ. ಕೆಲವು ಜಿಲ್ಲಾ ಘಟಕಗಳ ಅಧ್ಯಕ್ಷರು ಸುಮಾರು 1995-96ರಿಂದ ಲೆಕ್ಕ ಪತ್ರಗಳನ್ನು ನೀಡಿಲ್ಲ. ನೆನಪಿನ ಓಲೆಗಳಿಗೆ ಪ್ರತಿಕ್ರಿಯಿಸಿಲ್ಲ.

ಲೆಕ್ಕ ಕೊಡದ ಕೆಲವು ದೊಡ್ಡಪ್ಪಂದಿರು :

  • ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಕೆ. ಮಹಮೂದ ಅವರು ಕಳೆದ ಆರು ವರ್ಷಗಳಿಂದ ಲೆಕ್ಕ ನೀಡಿಲ್ಲ . ಅಮೃತನಿಧಿ ಚೀಟಿಯ 16 ಸಾವಿರ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೆ ಸಲ್ಲಿಸಿಲ್ಲ.
  • ಗುಲ್ಬರ್ಗದ ಸುರಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಜಿ. ಅಗಸ್ಟೀನ್‌ ಅವರು ಎಂಟೂವರೆ ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಸಾಲ ರೂಪದಲ್ಲಿ ಪಡೆದು 12 ವರ್ಷಗಳಾಯಿತು. ಇದುವರೆಗೆ ಹಣ ಮರಳಿಸಿಲ್ಲ.
  • ಜಿಲ್ಲಾ ಘಟಕಗಳ ಮಾಜಿ ಅಧ್ಯಕ್ಷರುಗಳಾದ ಬೆಳಗಾವಿಯ ವಿ. ಚಿ. ಹಿರೇಮಠ, ತುಮಕೂರು ಜಿಲ್ಲೆಯ ಸಿ. ಎಚ್‌. ಮರಿದೇವರು ಮತ್ತು ವೀರಭದ್ರಯ್ಯ, ಗುಲ್ಪರ್ಗದ ಪಿ. ಎಂ. ಮಣ್ಣೂರು, ಬಾಗಲಕೋಟೆ ಜಿಲ್ಲೆಯ ಬಿ. ಆರ್‌. ಪೊಲೀಸ್‌ ಪಾಟೀಲ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಪ್ರಿಯ ಮತ್ತು ಚಂದ್ರಯ್ಯನಾಯ್ಜು, ಬಳ್ಳಾರಿ ಜಿಲ್ಲೆಯ ಕಲ್ಲೇಶ ಇಟಗಿ ಲೆಕ್ಕ ಪತ್ರಗಳನ್ನು ಒಪ್ಪಿಸಿಲ್ಲ.
  • ಮಂಡ್ಯದ ಜಿ. ಟಿ. ವೀರಪ್ಪ, ಉತ್ತರ ಕನ್ನಡ ಜಿಲ್ಲೆಯ ಪ್ರಕಾಶ್‌ ಎ. ನಾಯಕ್‌, ಚಿಕ್ಕಮಗಳೂರಿನ ಕೆ. ವಿ. ಶೇಷಾದ್ರಿ, ಕೋಲಾರದ ಜಿ.ಇ. ಜ್ಞಾನಾನಂದ ಅವರಿಗೆ ಅಮೃತ ನಿಧಿ ಹಣ ಹಿಂತಿರುಗಿಸದೇ ಇರುವ ಆಪಾದನೆಯ ಮೇಲೆ ನೋಟಿಸ್‌ ಜಾರಿ ಮಾಡಲಾಗಿದೆ.
ಇದೇ ರೀತಿ ಪುಸ್ತಕ ಸಾಲ ಪಡೆದುಕೊಂಡ ವ್ಯಕ್ತಿಗಳಿಗೆ, ಸಂಸ್ಥೆಗಳಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ. (ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X