ಜೂ. 29ರಂದು ಮಂಗಳೂರಲ್ಲಿ ಗಡಿಯಾಚೆಗಿನ ಕನ್ನಡಿಗರ ಸಮಾವೇಶ
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಜೂನ್ 29 ಮತ್ತು 30ರಂದು ನಗರದ ಪುರಭವನದಲ್ಲಿ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮಾವೇಶವನ್ನು ಏರ್ಪಡಿಸಲಾಗಿದೆ.
ಆಂಧ್ರಪ್ರದೇಶ, ಕೇರಳ, ಕಾಸರಗೋಡು, ಮುಂಬಯಿ, ಚೆನ್ನೈ, ಹೊಸದಿಲ್ಲಿ ಮುಂತಾದ ರಾಜ್ಯಗಳ ಕಲಾವಿದರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ನಿರ್ದೇಶನಾಲಯ ಪ್ರಕಟಿಸಿದೆ.
ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಸಂಘದ ಎಲ್ಲ ಸದಸ್ಯರೂ ಈ ಸಮಾವೇಶದಲ್ಲಿ ಭಾಗವಹಿಸಲು ಅನನುಕೂಲವಾಗುವುದಾದರೆ, ಪ್ರತಿನಿಧಿಗಳನ್ನೂ ಕಳುಹಿಸಿಕೊಡಬಹುದು. ಜೊತೆಗೆ ಕನ್ನಡ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ, ವರದಿಗಳನ್ನು ಸಮಾವೇಶದಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ ಎಂದು ನಿರ್ದೇಶನಾಲಯ ಹೇಳಿದೆ.
ಪತ್ರ ಅಥವಾ ಟೆಲಿಗ್ರಾಮ್ ಮೂಲಕ ವ್ಯವಹರಿಸಲು ವಿಳಾಸ : ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002.
(ಇನ್ಫೋ ವಾರ್ತೆ)