ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ : ಮತ್ತೆ ಡಿಂಡಿಮ ಬಾರಿಸಿದ ಸರ್ಕಾರ
ಬೆಂಗಳೂರು :ಅಂಗಡಿ ಮತ್ತಿತರ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಬಳಸುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆ ಮೇರೆಗೆ ರಾಜ್ಯ ಸರ್ಕಾರ ಈ ಸುತ್ತೋಲೆ ಹೊರಡಿಸಿದ್ದು , ನಾಮಫಲಕಗಳಲ್ಲಿ ಕನ್ನಡ ಬಳಸದಿದ್ದರೆ ಅಂಥ ಅಂಗಡಿಗಳ ಪರವಾನಗಿ ರದ್ದುಪಡಿಸುವುದಾಗಿ ಹೇಳಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ಒಳಪಡುವಂತೆ ಈ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದಾಗಿ ರಾಜ್ಯದ ಮಹಾನಗರ ಪಾಲಿಕೆಗಳು, ಪುರಸಭೆಗಳು ಹಾಗೂ ನಗರಸಭೆಗಳು ತಮ್ಮ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು ಕನ್ನಡ ನಾಮಫಲಕ ಹೊಂದಿರದಿದ್ದಲ್ಲಿ - ಅಂಥ ಅಂಗಡಿಗಳ ಪರವಾನಗಿ ರದ್ದು ಮಾಡಬಹುದಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಕನ್ನಡೀಕರಣಕ್ಕಾಗಿ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ನಾಮ ಫಲಕ ಸಂಪೂರ್ಣವಾಗಿ ಕನ್ನಡದಲ್ಲಿ ಇರದಿದ್ದರೂ, ಕೆಲವಾದರೂ ಕನ್ನಡ ಪದಗಳು ಇರಲೇಬೇಕು ಎಂದು ಬರಗೂರು ತಿಳಿಸಿದರು.
ಈವರೆಗೂ
ನಾಮಕರಣ
ಆಗಿಲ್ಲದ
ರಸ್ತೆ
,
ವೃತ್ತ
,
ಉದ್ಯಾನಗಳಿಗೆ
ಕನ್ನಡ
ಕವಿಗಳು,
ಚಿಂತಕರು
ಹಾಗೂ
ಸ್ಥಳೀಯ
ಗಣ್ಯರ
ಹೆಸರಿಡಲು
ತಿಳಿಸಲಾಗಿದೆ.
ಉದ್ಯಾನಗಳಲ್ಲಿ
ಕನ್ನಡ
ಸೂಕ್ತಿ
ಫಲಕಗಳನ್ನು
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಸಹಯೋಗದಲ್ಲಿ
ಹಾಕಲು
ಸುತ್ತೋಲೆಯಲ್ಲಿ
ತಿಳಿಸಲಾಗಿದೆ
ಎಂದು
ಬರಗೂರು
ಹೇಳಿದರು.
(ಇನ್ಫೋ
ವಾರ್ತೆ)