ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರವಣಬೆಳಗೊಳದಿ ಡಿ.21ರಿಂದ ಕಸಾಪ ಅಧ್ಯಕ್ಷರ ಸಭೆ
ಹಾಸನ: ಡಿಸೆಂಬರ್ 21 ಮತ್ತು 22ರಂದು ಶ್ರವಣ ಬೆಳಗೊಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರುಗಳ ಸಮಾವೇಶ ಹಾಗೂ ಸಾಹಿತ್ಯ ಪರಿಷತ್ನ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಬೆಳಗಾವಿಯಲ್ಲಿ ನಡೆಯಲಿರುವ 70ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಆಯ್ಕೆಯೂ ಇದೇ ಸಭೆಯಲ್ಲಿ ನಡೆಯಲಿದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಚ್. ಬಿ. ಮದನಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರುಗಳಲ್ಲದೆ, ಮುಂಬಯಿ, ಚೆನ್ನೈ ಹಾಗೂ ಕಾಸರಗೋಡಿನ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರೂ ಭಾಗವಹಿಸುವರು. ಈ ಅಧ್ಯಕ್ಷರುಗಳ ಕುಟುಂಬದವರನ್ನೂ ಸಭೆಗೆ ಆಹ್ವಾನಿಸಲಾಗಿದ್ದು ಅವರಿಗೆ ಬೇಲೂರು, ಹಳೇ ಬೀಡು, ಪ್ರವಾಸವನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದೆ. ಸಭೆಯನ್ನು ಡಿ. 21ರಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸುವರು.
(ಇನ್ಫೋ ವಾರ್ತೆ)
Comments
Story first published: Monday, December 2, 2002, 5:30 [IST]