ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿ ಪಕ್ಷಿಗಳನ್ನು ಪೂಜಿಸುವವರು ಮನುಷ್ಯರನ್ನೇಕೆ ಅಸ್ಪೃಶ್ಯರೆನ್ನುತ್ತಾರೆ ?

By Staff
|
Google Oneindia Kannada News

ಬೆಂಗಳೂರು: ನಮ್ಮ ಸಂವಿಧಾನಕ್ಕೆ ವಿಶ್ವದಲ್ಲೇ ಅತ್ಯಂತ ಮಾನವೀಯ ಸಂವಿಧಾನ ಎಂಬ ಹೆಸರಿದೆ. ಅತ್ಯಂತ ಪ್ರಗತಿಪರ ಸಂವಿಧಾನವನ್ನು ಡಾ. ಅಂಬೇಡ್ಕರ್‌ ನಮ್ಮ ದೇಶಕ್ಕೆ ನೀಡಿದ್ದಾರೆ. ಇಂತಹ ಮೌಲ್ಯಯುತ ಸಂವಿಧಾನವನ್ನು ಪರಾಮರ್ಶಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದು ದಲಿತ ಕವಿ ಹಾಗೂ ಮಾಜಿ ಶಾಸಕ ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ಎಷ್ಟೇ ಶ್ರೇಷ್ಠವಾಗಿರಲಿ, ಅದನ್ನು ಜಾರಿಮಾಡುವವರು ಸರಿಯಿಲ್ಲದೇ ಇದ್ದರೆ ಏನು ಪ್ರಯೋಜನ...? ಆದ್ದರಿಂದ ಸಂವಿಧಾನ ಪರಾಮರ್ಶೆಯ ಪ್ರಯತ್ನ ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಸಂಬಂಧಪಟ್ಟವರು ಯೋಜನೆ ಮಾಡಬೇಕು ಎಂದು ಇತ್ತೀಚೆಗೆ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿದ್ಧಲಿಂಗಯ್ಯ ಹೇಳಿದರು.

ಪ್ರಾಣಿ ಪಕ್ಷಿ, ಮರ ಬೆಟ್ಟ, ಕಾಡುಗಳನ್ನು ಪೂಜಿಸುವ ನಮ್ಮ ಜನ ಜೊತೆಯಲ್ಲೇ ಇರುವ ಮನುಷ್ಯರನ್ನು ಆದರದಿಂದ ಕಾಣುವುದಿಲ್ಲ. ಎಲ್ಲ ಕಡೆಯಲ್ಲೂ ದೇವರನ್ನು ಕಾಣುವವರು ಮನುಷ್ಯರನ್ನು ಅಸ್ಪೃಶ್ಯರೆಂದು ಕಡೆಗಣಿಸಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರ್ಯ ಬಂದು 50 ವರ್ಷಗಳು ಕಳೆದರೂ ದಲಿತರ ಮೇಲಿನ ಹಲ್ಲೆ ಮುಂದುವರೆದಿದೆ. ಇದರ ಹಿಂದಿರುವ ಕಾರಣವನ್ನು ಹುಡುಕಬೇಕು ಎಂದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X