ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಾರರಿಗೆ ಮಧ್ಯಪ್ರದೇಶ ಸರಕಾರದ ಕಬೀರ್‌ ಸಮ್ಮಾನ್‌ ಪುರಸ್ಕಾರ

By Staff
|
Google Oneindia Kannada News

ಬೆಂಗಳೂರು: ಕನ್ನಡದ ಹಿರಿಯ ಕವಿ, ನಾಟಕಕಾರ ಡಾ. ಚಂದ್ರಶೇಖರ್‌ ಕಂಬಾರ ಅವರಿಗೆ ಪ್ರತಿಷ್ಠಿತಿ ಕಬೀರ್‌ ಸಮ್ಮಾನ್‌ ಪ್ರಶಸ್ತಿ ದೊರೆತಿದೆ.

ಮಧ್ಯಪ್ರದೇಶ ಸರಕಾರ ನೀಡುವ ಈ ಪುರಸ್ಕಾರ ಎರಡನೇ ಬಾರಿಗೆ ಕನ್ನಡ ಸಾಹಿತ್ಯಲೋಕಕ್ಕೆ ಸಲ್ಲುತ್ತಿದೆ. ಈ ಹಿಂದೆ ಕವಿ, ಗೋಪಾಲಕೃಷ್ಣ ಅಡಿಗರಿಗೆ ಈ ಪ್ರಶಸ್ತಿ ಲಭಿಸಿತ್ತು. ಕಂಬಾರರು ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯವನ್ನು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

ಮರಾಠೀ ನಾಟಕಕಾರ ಗೋವಿಂದ ಪಿ. ದೇಶಪಾಂಡೆ, ಹಿಂದೀ ಕವಿ ಚಂದ್ರಕಾಂತ್‌ ದೇವ್‌ತಾಲೆ, ಖ್ಯಾತ ಬಂಗಾಳೀ ಬರೆಹಗಾರ್ತಿ ನವನೀತಾ ಸೇನ್‌ ಹಾಗೂ ಕನ್ನಡ ಕವಿ ಎಚ್‌. ಎಸ್‌. ಶಿವಪ್ರಕಾಶ್‌ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ, ವರ್ಧಮಾನ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯಂತಹ ಪ್ರತಿಷ್ಠಿತ ಪುರಸ್ಕಾರಗಳು ಡಾ. ಚಂದ್ರಶೇಖರ್‌ ಕಂಬಾರರಿಗೆ ದೊರೆತಿವೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X