ರಾಮಾಯಣ ದರ್ಶನಂಗೆ ಸಮನಾದ ಕಾವ್ಯ ಇನ್ನೊಂದಿಲ್ಲ, ಮುಂದೆ ಹುಟ್ಟೊಲ್ಲ
ಮಂಡ್ಯ : ಒಂದೂವರೆ ಸಾವಿರ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಲೋಕ ಸಾಧಿಸಲು ಅಸಾಧ್ಯವಾದುದನ್ನು ಕುವೆಂಪು ಸಾಧಿಸಿದರು. ಶೂದ್ರರ ಉದ್ಧಾರಕ್ಕಾಗಿ ಭೂಮಿಯಿಂದ ಆಕಾಶದವರೆಗೆ ಶೂದ್ರ ಕವಿಯಾಗಿ ಬೆಳೆದು ಶ್ರಮಿಸಿದ ಚೇತನ ಅವರು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ವಿಶ್ವ ವಿದ್ಯಾಲಯ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಡಾ.ಕೆ.ಪ್ರಭುಶಂಕರ ಅವರು ಕುವೆಂಪು ಅವರನ್ನು ಬಣ್ಣಿಸಿದ್ದಾರೆ.
ಸಾಂಸ್ಕೃತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ಸಮಾಜದ ಬದಲಾವಣೆಗೆ ಕುವೆಂಪು ಶ್ರಮಿಸಿದರು ಎಂದು ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಕುವೆಂಪು ರಂಗದರ್ಶನ ಮತ್ತು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪ್ರಭುಶಂಕರ ಹೇಳಿದರು.
ಸಾಹಿತ್ಯವನ್ನು ಸಂತೋಷಕ್ಕಾಗಿ ರಚಿಸುವ ಕವಿಗಳಿಗಿಂತ ಕುವೆಂಪು ಭಿನ್ನವಾಗಿದ್ದರು. ಸಮಾಜ ಬದಲಾವಣೆಗಾಗಿ ಸಾಹಿತ್ಯದ ಮೂಲಕ ಅವರು ಹೋರಾಟ ನಡೆಸಿದರು. ಅಜ್ಞಾನ, ಮೂಢ ನಂಬಿಕೆಯಿಂದ ಬಳಲುತ್ತಿದ್ದ ಸಮಾಜವನ್ನು ಸಾಹಿತ್ಯದ ಮೂಲಕ ಎಚ್ಚರಿಸಲು ಪ್ರಯತ್ನಿಸಿದರು.
ಕುವೆಂಪು ಅವರ ರಾಮಾಯಣ ದರ್ಶನಂಗೆ ಸಮನಾದ ಕಾವ್ಯ ಮತ್ತೊಂದು ಹುಟ್ಟಿಲ್ಲ . ಮುಂದೂ ಹುಟ್ಟಲೂ ಸಾಧ್ಯವಿಲ್ಲ . ನಾಯಕ, ಕಾವ್ಯ, ವಿಮರ್ಶೆ, ಕಾದಂಬರಿ, ಕವಿತೆ, ಮಹಾಕಾವ್ಯಗಳ ಮೂಲಕ ಸಮಾಜದ ಮೂಲಭೂತ ಬದಲಾವಣೆಗೆ ಶ್ರಮ ಪಟ್ಟವರಲ್ಲಿ ಕುವೆಂಪು ಮೊದಲಿಗರು ಎಂದರು ಪ್ರಭುಶಂಕರ ಅಭಿಪ್ರಾಯಪಟ್ಟರು.
ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ನೀಡುವಂತೆ ಭಾರತೀಯ ಸಾಹಿತಿಗಳು ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವಿಷಾದಿಸಿದ ಪ್ರಭುಶಂಕರ, ಕುವೆಂಪು ಅವರನ್ನು ಸಾಹಿತ್ಯ ತಪಸ್ವಿ , ಮೇರು ಕವಿ ಎಂದು ಬಣ್ಣಿಸಿದರು.
ಮೈಸೂರು
ವಿಶ್ವ
ವಿದ್ಯಾಲಯದ
ನಿವೃತ್ತ
ಕುಲಪತಿ
ದೇ.ಜವರೇಗೌಡ
ಕಾರ್ಯಕ್ರಮದ
ಅಧ್ಯಕ್ಷತೆ
ವಹಿಸಿದ್ದರು.
ಮಾಜಿ
ಶಾಸಕ
ಸಚ್ಚಿದಾನಂದ,
ಪಿಇಎಸ್
ಇಂಜಿನಿಯರಿಂಗ್
ಕಾಲೇಜಿನ
ನಿವೃತ್ತ
ಪ್ರಾಂಶುಪಾಲ
ಡಾ.ರಾಮಲಿಂಗಯ್ಯ
ಸಮಾರಂಭದಲ್ಲಿ
ಹಾಜರಿದ್ದರು.
(ಇನ್ಫೋ
ವಾರ್ತೆ)