ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಸದರ ಸಭೆ
ಬೆಂಗಳೂರು : ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ಚರ್ಚಿಸಲು ರಾಜ್ಯದ ಸಂಸದರ ಸಭೆಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಕರೆದಿದೆ.
ಡಿಸೆಂಬರ್ 7ರ ಶುಕ್ರವಾರ ಬೆಳಗ್ಗೆ ಪರಿಷತ್ತಿನ ಸಭಾಂಗಣದಲ್ಲಿ ಗಡಿ ವಿವಾದದ ಕುರಿತು ಸಂಸದರ ಸಭೆ ನಡೆಯಲಿದೆ. ಗಡಿ ವಿವಾದದ ಕುರಿತಂತೆ ಸುಪ್ರಿಂಕೋರ್ಟ್ನ ಕಟ್ಟೆ ಹತ್ತುವುದಾಗಿ ಮಹಾರಾಷ್ಟ್ರ ಸರ್ಕಾರ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಗಡಿ ವಿವಾದದ ಸಂಬಂಧ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಂಸದರ ಸಭೆ ಚರ್ಚಿಸುವುದು. ಮಹಾಜನ ವರದಿ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಮಾರ್ಗೋಪಾಯಗಳ ಕುರಿತೂ ಸಭೆ ಸಮಾಲೋಚನೆ ನಡೆಸುವುದು. ಸಾರ್ವಜನಿಕರು ಕೂಡ ಈ ಚರ್ಚೆಯಲ್ಲಿ ಭಾಗವಹಿಸಬಹುದು, ಉಪಯುಕ್ತ ಸಲಹೆಗಳನ್ನು ನೀಡಬಹುದು ಎಂದು ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
Comments
Story first published: Monday, December 16, 2002, 5:30 [IST]