ನೀನಾಸಂನ ಚಿದಂಬರರಾವ್ ಜಂಬೆಗೆ ರುಜುವಾತು ಫೆಲೋಶಿಪ್
ಬೆಂಗಳೂರು : ಹಿರಿಯ ರಂಗ ನಿರ್ದೇಶಕ ಹಾಗೂ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ರಂಗಶಾಲೆಯ ಪ್ರಾಂಶುಪಾಲ ಎ.ಜಿ.ಚಿದಂಬರ ರಾವ್ ಜಂಬೆ ಅವರಿಗೆ ಈ ಬಾರಿಯ ಪ್ರತಿಷ್ಠಿತ ರುಜುವಾತು ಫೆಲೋಶಿಪ್ ದೊರೆತಿದೆ.
ಫೆಲೋಶಿಪ್ ಮೂವತ್ತು ಸಾವಿರ ರುಪಾಯಿಗಳ ಮೊತ್ತವನ್ನು ಹೊಂದಿದೆ. ಜಂಬೆಯವರು ಈ ಫೆಲೋಷಿಪ್ನಡಿ ಕೇರಳದ ಕಲಾ ಮಂಡಲದ ನೆರವಿನಲ್ಲಿ - ಆಂಗಿಕ ಮತ್ತು ವಾಚಿಕ ಕಲೆಗೆ ಸಂಬಂಧಿಸಿದ ಹಾಗೂ ಕೂಡಿಯಾಟ್ಟಂ ಮತ್ತು ಕಥಕ್ಕಳಿ ಪ್ರಕಾರಗಳ ಅಧ್ಯಯನ ಕೈಗೊಳ್ಳುವರು ಎಂದು ರುಜುವಾತು ಟ್ರಸ್ಟ್ನ ಪರವಾಗಿ ಡಾ.ಯು.ಆರ್.ಅನಂತಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾರೀ
ಚಿದಂಬರರಾವ್
ಜಂಬೆ
?
ಜಂಬೆ
ಅವರು
ಜನಿಸಿದ್ದು
1949
ರಲ್ಲಿ
.
1982
ರಿಂದ
ನೀನಾಸಂ
ರಂಗಶಾಲೆಯ
ಪ್ರಾಂಶುಪಾಲರಾಗಿ
ಸೇವೆ
ಸಲ್ಲಿಸುತ್ತಿರುವ
ಜಂಬೆ
ಅವರ
ಗರಡಿಯಲ್ಲಿ
ನೂರಾರು
ರಂಗಕರ್ಮಿಗಳು
ರೂಪುಗೊಂಡಿದ್ದಾರೆ.
ಉಡುಪಿಯ
ಯಕ್ಷಗಾನ
ಕೇಂದ್ರದಲ್ಲಿ
ತರಬೇತಿ
ಪಡೆದಿರುವ
ಜಂಬೆ
ಅವರು
ಭಾರತೀಯ
ರಂಗಲೋಕದ
ಅಂಗ್ರಪಂಕ್ತಿಯಲ್ಲಿನ
ಪ್ರಮುಖರಲ್ಲೊಬ್ಬರು.
ಕನ್ನಡ,
ಸಂಸ್ಕೃತ,
ಜಾನಪದ
ಹಾಗೂ
ಐರೋಪ್ಯ
ಮೂಲಗಳಿಂದ
ಪಡೆದ
ವಿಶಿಷ್ಟ
ನಾಟಕಗಳನ್ನು
ಜಂಬೆಯವರು
ನಿರ್ದೇಶಿಸಿದ್ದು
-
ಹಲವಾರು
ರಂಗ
ಶಿಬಿರಗಳನ್ನೂ
ನಡೆಸಿದ್ದಾರೆ.
(ಇನ್ಫೋ ವಾರ್ತೆ)