#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ
ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್ಟ್ಯಾಗ್ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯ 6ನೇ ಸಂಚಿಕೆಯಲ್ಲಿ ಬೆಂಗಳೂರಿನ ಮನೋವೈದ್ಯ ಆಚಾರ್ಯ ಶ್ರೀಧರ ಅವರು ಅನಿಸಿಕೆ, ಅಭಿಪ್ರಾಯ, ಆತಂಕ, ಆಶಯವನ್ನು ವಿಡಿಯೋ ಮೂಲಕ ಮುಂದಿಟ್ಟಿದ್ದಾರೆ.
ನಿಮ್ಮ ಉತ್ತರಗಳನ್ನು ಸರಣಿ ರೂಪದಲ್ಲಿ 'ಒನ್ಇಂಡಿಯಾ ಕನ್ನಡ' ವೆಬ್ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.
1.
ಕೊರೊನಾ
ಸೃಷ್ಟಿಸಿರುವ
ಈ
ಬಿಕ್ಕಟ್ಟನ್ನು
ವೈಯಕ್ತಿಕವಾಗಿ
ಹೇಗೆ
ಎದುರಿಸುತ್ತಿದ್ದೀರಾ?
2.
ವೈದ್ಯಲೋಕದ
ಈ
ಸವಾಲವನ್ನು
ಹೇಗೆ
ಅರ್ಥೈಸುತ್ತೀರಾ?
ಇದರ
ಕೊನೆ
ಯಾವಾಗ
ಮತ್ತು
ಹೇಗೆ
ಆಗಬಹುದು
ಅಂತ
ಅನ್ನಿಸುತ್ತಿದೆ?
3.
'ಕೊರೊನಾ
ನಂತರ
ಹಳೇ
ವ್ಯವಸ್ಥೆಯೇ
ಇನ್ನಷ್ಟು
ಬಲಗೊಳ್ಳುತ್ತದೆ,
ಶ್ರೀಮಂತರು
ಹಾಗೂ
ಆಳುವ
ವ್ಯವಸ್ಥೆಗಳು
ಇನ್ನಷ್ಟು
ಪ್ರಬಲರಾಗುತ್ತಾರೆ'
ಎಂಬ
ವಿಶ್ಲೇಷಣೆ
ಇದೆ,
ನಿಮಗೆ
ಏನು
ಅನ್ನಿಸುತ್ತದೆ?
4.
ಮುಂದಿನ
ಕೆಲವು
ದಿನಗಳಲ್ಲಿ
ಕೊರೊನಾ
ಒಡ್ಡುವ
ಸವಾಲುಗಳು
ಹೇಗಿರಬಹುದು?
ಅದಕ್ಕಾಗಿ
ಸಿದ್ಧತೆ
ಹೇಗಿರಬೇಕು?
ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ
ಸಂಕ್ಷಿಪ್ತ
ಪರಿಚಯ:
ಡಾ.
ಆಚಾರ್ಯ
ಶ್ರೀಧರ
ಬೆಂಗಳೂರಿನಲ್ಲಿ
ಹುಟ್ಟಿ,
ಬೆಳೆದವರು,
ಬಹಳಷ್ಟು
ಸಮಯ
ಬೋಧನೆ,
ಸಂಶೋಧನೆಯಲ್ಲಿ
ಕಾಲವಿನಿಯೋಗಿಸಿದ್ದು,
ವಿಚಾರ
ವಿನಿಮಯ
ಮಾಡಿದ್ದು
ಮತ್ತು
ದೃಶ್ಯಮಾಧ್ಯಮಗಳಲ್ಲಿ
ಕಾಣಿಸಿಕೊಂಡಿದ್ದು
ಕಾಣಿಸಿಕೊಂಡಿದ್ದೇ-
ಅದು
ಮಕ್ಕಳ
ಮಾನಸಿಕ
ಸಮಸ್ಯೆಗಳಾಗಿರಲಿ,
ಪೋಷಕರ
ಮನೋಗೊಂದಲಗಳಾಗಿರಲಿ,
ಅಥವಾ
ಸಾಮಾಜಿಕ
ಸಮಸ್ಯೆಗಳಾಗಿರಲಿ
ಅದಕ್ಕೊಂದು
ಮನೋವೈಜ್ಞಾನಿಕ
ವಿವರಣೆ,
ವ್ಯಾಖ್ಯಾನಗಳಿರುವುದನ್ನು
ಪರಿಚಯಿಸುವುದು,
-ಸಧ್ಯಾತ್ಮ(ಆಧ್ಯಾತ್ಮಕ್ಕಿಂತಲೂ ಪ್ರಭಾವಶಾಲಿ)ದ ಬಗ್ಗೆ ಮತ್ತುಷ್ಟು ತಿಳಿವಳಿಕೆ ಮತ್ತು ಪ್ರಚಾರದ ಮಾತುಗಳು. ಇದರಿಂದಾಗಿ ಮೂಡಿದ ಮನಸನ್ನು ಸದಾ ಬಹುವಿಸ್ತಾರದ ಸ್ಥಿತಿಯಲ್ಲಿ ಇರುವುದನ್ನು ಕಲಿಸಿಕೊಡುವ ಬೃಹನ್ಮತಿ ಮನೋವಿಲಾಸದ ತಂತ್ರಗಳ ತರಬೇತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಮತ್ತು ಇದೀಗ ಕನ್ನಡದಲ್ಲಿ ಮನೋವಿಜ್ಞಾನದ ಎನ್ಸೈಕ್ಲೊಪಿಡಿಯ ಬರೆಯವ ಸಾಹಸ ಮಾಡುತ್ತಿರುವುದು ಮತ್ತು ಹಲವಾರು ಮನೋವಿಜ್ಞಾನದ ಪುಸ್ತಕ ಮತ್ತು ಲೇಖನಗಳ ಕರ್ತೃ(ಕನ್ನಡದಲ್ಲಿ ಮೊಟ್ಟ ಮೊದಲ ಮನೋವಿಜ್ಞಾನದ ಪದಕೋಶ ಬರೆದವರು) ಸುಧಾ ವಾರಪತ್ರಿಕೆಯಲ್ಲಿ ಅಂಕಣ ಏಳೆಂಟು ವರುಷಗಳ ಕಾಲ ಅಂಕಣ, ವಿಜಯ ಕರ್ನಾಟಕ, ಉದಯವಾಣಿಯ ಅಂಕಣಕಾರರು.