Life After Corona:ಎಲ್ಲವೂ ಶಾಶ್ವತ ಎನ್ನುವ ಭ್ರಮೆ ಅಳಿಸಿದೆ
ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಪ್ರಾಜ್ಞರು, ತಜ್ಞರು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.
ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್ಟ್ಯಾಗ್ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ 14ನೇ ಲೇಖನವಾಗಿ ಚಿಕ್ಕಮಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಸಹಾಯಕ ನಿರ್ದೇಶಕಿ, ಸಾಹಿತಿ ಮಂಜುಳಾ ಹುಲ್ಲಹಳ್ಳಿ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.
ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್ಇಂಡಿಯಾ ಕನ್ನಡ' ವೆಬ್ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.
1.
ಕೊರೊನಾ
ಸೃಷ್ಟಿಸಿರುವ
ಈ
ಬಿಕ್ಕಟ್ಟನ್ನು
ವೈಯಕ್ತಿಕವಾಗಿ
ಹೇಗೆ
ಎದುರಿಸುತ್ತಿದ್ದೀರಾ?
2.
ವೈದ್ಯಲೋಕದ
ಈ
ಸವಾಲವನ್ನು
ಹೇಗೆ
ಅರ್ಥೈಸುತ್ತೀರಾ?
ಇದರ
ಕೊನೆ
ಯಾವಾಗ
ಮತ್ತು
ಹೇಗೆ
ಆಗಬಹುದು
ಅಂತ
ಅನ್ನಿಸುತ್ತಿದೆ?
3.
'ಕೊರೊನಾ
ನಂತರ
ಹಳೇ
ವ್ಯವಸ್ಥೆಯೇ
ಇನ್ನಷ್ಟು
ಬಲಗೊಳ್ಳುತ್ತದೆ,
ಶ್ರೀಮಂತರು
ಹಾಗೂ
ಆಳುವ
ವ್ಯವಸ್ಥೆಗಳು
ಇನ್ನಷ್ಟು
ಪ್ರಬಲರಾಗುತ್ತಾರೆ'
ಎಂಬ
ವಿಶ್ಲೇಷಣೆ
ಇದೆ,
ನಿಮಗೆ
ಏನು
ಅನ್ನಿಸುತ್ತದೆ?
4.
ಮುಂದಿನ
ಕೆಲವು
ದಿನಗಳಲ್ಲಿ
ಕೊರೊನಾ
ಒಡ್ಡುವ
ಸವಾಲುಗಳು
ಹೇಗಿರಬಹುದು?
ಅದಕ್ಕಾಗಿ
ಸಿದ್ಧತೆ
ಹೇಗಿರಬೇಕು?
ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ
1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
ಕೊರೊನಾ ಬಿಕ್ಕಟ್ಟು ವೈಯಕ್ತಿಕವಾಗಿ ಹೆಚ್ಚಿನ ತೊಂದರೆ ನೀಡಿಲ್ಲ. ಬದಲಿಗೆ ತುಂಬಾ ದಿನಗಳಿಂದ ಹದಗೆಟ್ಟಿದ್ದ ಆರೋಗ್ಯ ಸರಿಪಡಿಸಿಕೊಳ್ಳಲು, ಶಿಥಿಲವಾಗುತ್ತಿದ್ದ ಕೌಟುಂಬಿಕ ಜೀವನವನ್ನು ಮರು ರೂಪಿಸಿಕೊಳ್ಳಲು, ಬಹಳ ದಿನಗಳಿಂದ ಬಳಸದೇ ಬಿಟ್ಟಿದ್ದ ಪುಸ್ತಕಗಳನ್ನು ತಿರುವಿಹಾಕಲು ಒಂದು ಅಲ್ಪವಿರಾಮ ಕೊಟ್ಟಿದೆ.
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
ಸಾಂಕ್ರಾಮಿಕ ರೋಗಗಳು ವೈದ್ಯಕೀಯ ಜಗತ್ತಿಗೆ ಯಾವಾಗಲೂ ಸವಾಲು ಒಡ್ಡುತ್ತಲೇ ಇರುತ್ತವೆ. ಸಿಡುಬು, ಪೋಲಿಯೋ, ಫ್ಲೂ ಮುಂತಾದ ರೋಗಗಳಿಗೆ ಮದ್ದು ಕಂಡು ಹಿಡಿದುದು ಈ ರೀತಿಯ ಸವಾಲುಗಳಿಂದಲೇ. ಇದಕ್ಕೂ ಒಂದು ಶಾಶ್ವತವಾದ ಔಷಧ ಸಿಕ್ಕೇ ಸಿಕ್ಕುತ್ತದೆ.
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
ಇತಿಹಾಸ ನಿತ್ಯ ಪಾಠ ಕಲಿಸುತ್ತಲೇ ಇರುತ್ತದೆ. ಅದನ್ನು ಅರ್ಥೈಸಿಕೊಳ್ಳದ ಮೂಢಮತಿಗಳು ತಾವೇ ಶಾಶ್ವತ ಎನ್ನುವ ಭ್ರಮೆಯಲ್ಲಿ ಗುಡಿಸಿ ಗುಡ್ಡೆಹಾಕಿಕೊಳ್ಳಲು ನೋಡುತ್ತಾರೆ. ಕೊಂದವರುಳಿವರೇ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?
ಇಂದು ಕಾಣುತ್ತಿರುವುದಕ್ಕಿಂತಲೂ ಭೀಕರವಾಗಿರಬಹುದು. ಪರಸ್ಪರ ಸೌಹಾರ್ದ ಜೀವನ, ಕೊಡುಕೊಳ್ವೆಗಳು ಬೇಕು. ವಿಶಾಲವಾದ ಚಿಂತನೆ, ಹಂಚಿಕೊಳ್ಳುವ ಮನೋಭಾವ ವೃದ್ಧಿಸಬೇಕು.