KRS Dam Water Level Today | ಕೃಷ್ಣರಾಜಸಾಗರ ಅಣೆಕಟ್ಟು ಇಂದಿನ ನೀರಿನ ಮಟ್ಟ
ಕೆಆರ್ಎಸ್ ಜಲಾಶಯದ ಇತಿಹಾಸ:
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೆಆರ್ಎಸ್ ಎಂದೇ ಖ್ಯಾತಿ ಪಡೆದಿರುವ ಕೃಷ್ಣರಾಜಸಾಗರ. ಕೆಆರ್ಎಸ್ ಜಲಾಶಯ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಕನಸು. 1911ರಲ್ಲಿ ಕೆಆರ್ಎಸ್ ಜಲಾಶಯ ನಿರ್ಮಾಣ ಕಾರ್ಯ ಆರಂಭವಾಯಿತು. ಭಾರತಕ್ಕೆ ಸ್ವಾತಂತ್ರ ದೊರೆಯುವ ಮೊದಲೇ ನಿರ್ಮಾಣವಾದ ಈ ಜಲಾಶಯ ಅಂದಿನ ಕಾಲದ ತಂತ್ರಜ್ಞಾನದ ಚಿತ್ರಣವನ್ನು ಹೊಸ ತಲೆಮಾರಿಗೆ ಪರಿಚಯಿಸುತ್ತದೆ.
ಕೆಆರ್ಎಸ್ ಜಲಾಶಯದ ಸಾಮರ್ಥ್ಯ:
ಕೆಎಆರ್ಎಸ್ ಜಲಾಶಯ 42.67 ಮೀಟರ್ ಎತ್ತರವಿದೆ, ಉದ್ದ 2,620 ಮೀಟರ್. ಜಲಾಶಯದಲ್ಲಿ 124.80 ಅಡಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.
ಕೃಷ್ಣ ರಾಜ ಸಾಗರ (KRS) ಜಲಾಶಯದ ಪ್ರಸ್ತುತ ನೀರಿನ ಮಟ್ಟ | |
---|---|
ಪ್ರಸ್ತುತ ನೀರಿನ ಮಟ್ಟ (Feet) | 101.22 |
ಜಲಾಶಯದ ಸಾಮರ್ಥ್ಯ (Feet) | 124.81 |
ಕಳೆದ ವರ್ಷದ ಗರಿಷ್ಠ ಮಟ್ಟ (Feet) | 123.72 |
ಜಲಾಶಯದ ಸಾಮರ್ಥ್ಯ (M.Cft.) | 49452 |
ಪ್ರಸ್ತುತ ನೀರಿನ ಮಟ್ಟ (M.Cft.) | 23781 |
ಕಳೆದ ವರ್ಷದ ಗರಿಷ್ಠ ಮಟ್ಟ (M.Cft.) | 47953 |
ಪ್ರಸ್ತುತ ಒಳಹರಿವು (CuSecs) | 2962 |
ಪ್ರಸ್ತುತ ಹೊರಹರಿವು (CuSecs) | 1491 |
ಕೆಆರ್ಎಸ್ ಜಲಾಶಯ ಎಲ್ಲಿದೆ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.
ಕೆಆರ್ಎಸ್ ಜಲಾಶಯದ ಉಪಯೋಗ:
ಕರ್ನಾಟಕದ ಮತ್ತು ತಮಿಳುನಾಡು ನಡುವೆ 'ಕಾವೇರಿ' ಜಲವಿವಾದದ ಕಾವು ಏರಿದಾಗ ಕೆಆರ್ಎಸ್ ಜಲಾಶಯದಲ್ಲಿ ಎಷ್ಟು ನೀರಿದೆ ಎಂಬ ಚರ್ಚೆ ಆರಂಭವಾಗುತ್ತದೆ. 1938ರಲ್ಲಿ ಕುಡಿಯುವ ನೀರು ಪೂರೈಕೆ, ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಕೆಆರ್ಎಸ್ ಜಲಾಶಯ ನಿರ್ಮಾಣ ಮಾಡಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ಜಲಾಶಯದ ನೀರು ಆಧಾರ. ಜಲಾಶಯಕ್ಕೆ ಮೂರು ಪ್ರಮುಖ ನಾಲೆಗಳಿವೆ.
ಮೈಸೂರು, ಮಂಡ್ಯ, ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಕೆಆರ್ಎಸ್ ಜಲಾಶಯದ ಮೂಲಕ ಪೂರೈಕೆ ಮಾಡಲಾಗುತ್ತದೆ. ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಜಲಾಶಯ ಭರ್ತಿ ಆಗಲಿ ಎಂದು ಬೆಂಗಳೂರು ನಗರದ ಜನರು ಮಳೆಗಾಲದಲ್ಲಿ ಪ್ರಾರ್ಥನೆ ಮಾಡುತ್ತಾರೆ.
ಕೆಆರ್ಎಸ್ ಜಲಾಶಯದ ಪ್ರೇಕ್ಷಣೀಯ ಸ್ಥಳಗಳು:
ಕೆಆರ್ಎಸ್ ಜಲಾಶಯಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಬೃಂದಾವನ ಗಾರ್ಡನ್ ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ಹಲವಾರು ಕನ್ನಡ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ರಜೆ ದಿನಗಳಲ್ಲಿ ಬೃಂದಾವನ ಗಾರ್ಡನ್ ಪ್ರವಾಸಿಗರಿಂದ ತುಂಬಿ ಹೋಗಿರುತ್ತದೆ. ಅಂದವಾದ ಹುಲ್ಲಿನ ಹಾಸು, ಸಂಗೀತ ಕಾರಂಜಿ, ವಿಶಾಲವಾ ಹಸಿರು ಹುಲ್ಲಿನ ಹೊದಿಕೆ, ಬಗೆಬಗೆಯ ಹೂ ಮತ್ತು ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಕೆಆರ್ಎಸ್ ಜಲಾಶಯ ನೋಡಲು ಬಂದರೆ ಬೃಂದಾವನ ಗಾರ್ಡನ್, ರಂಗನತಿಟ್ಟು, ಮೇಲುಕೋಟೆ, ಟಿಪ್ಪು ಸುಲ್ತಾನನ ಕೋಟೆ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಬಹುದು. ಇದರ ಜೊತೆಗೆ ಸಾಂಸ್ಕೃತಿಕ ನಗರ ಮೈಸೂರು ಕೇವಲ 12 ಕಿ. ಮೀ. ದೂರದಲ್ಲಿದೆ.
ಕೆಆರ್ಎಸ್ ಜಲಾಶಯದ ಸಂದರ್ಶನ ಸಮಯ:
ಬೃಂದಾವನ ಗಾರ್ಡನ್ಗೆ ಸೋಮವಾರದಿಂದ ಶನಿವಾರದ ತನಕ ಪ್ರವಾಸಿಗರು ಭೇಟಿ ನೀಡಬಹುದು. ವಯಸ್ಕರಿಗೆ 20 ರೂ. ಮಕ್ಕಳಿಗೆ 5 ರೂ. ಪ್ರವೇಶದರವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಬಿಡುಗಡೆ ವಿಚಾರ ದೊಡ್ಡ ವಿವಾದವಾದರೆ ಜಲಾಶಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ. ಬೃಂದಾವನ ಗಾರ್ಡನ್ ಮುಚ್ಚಲಾಗುತ್ತದೆ