ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!

By * ಬಾಲರಾಜ್ ತಂತ್ರಿ, ಉಡುಪಿ
|
Google Oneindia Kannada News

Jokes for the day
ಗುಂಡ : ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್.
ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.

***

ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ದುಡಿದರು ದೇಶಕ್ಕಾಗಿ.
ಇಂದು 2010ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೋಟಿಗಾಗಿ.

***

ಸರ್ದಾರ್ಜಿ ಮತ್ತು ಕಪ್ಪೆ ನಡುವೆ ವಾಗ್ಯುದ್ದ ನಡೆಯಿತು.
ಕಪ್ಪೆ : ನೀವು ಸರ್ದಾರ್ಜಿಗಳು ಮುಠಾಳರು.
ಸರ್ದಾರ್ಜಿ : ಇಲ್ಲಾ ನಾವು ಮುಠಾಳರಲ್ಲ.
ಕಪ್ಪೆ : ನಿನ್ನ ಜೊತೆ ಮಾತನಾಡುವುದು ವೇಸ್ಟ್, ಸುಮ್ನೆ ಸಮಯ ವ್ಯರ್ಥ (ಎಂದು ಬಾವಿಗೆ ಹಾರಿತು)
ಸರ್ದಾರ್ಜಿ : ಛೇ.. ಇದರಲ್ಲಿ ಕಪ್ಪೆ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನಿದೆ?

***

ಮನಮುಟ್ಟುವ ಕನ್ನಡ ಸಂದೇಶಗಳು

ಮನಸಿಗೆ ನೋವಾಗುವಂತೆ ಮಾತಾಡಿ ನಾವು ಕೆಲವರನ್ನು ಕಳ್ಕೊತೀವಿ
ಹಾಗೆ ಏನೂ ಮಾತಾಡದೇ ಕೆಲವರನ್ನು ಕಳ್ಕೊತೀವಿ
ಏನೆ ಆಗಲಿ ಮನಸ್ಸು ಬಿಚ್ಚಿ ಮಾತಾಡಿ, ಜಸ್ಟ್ ಮಾತ್ ಮಾತಲ್ಲಿ.

***

Love is blind ಅಂತಾರೆ ಏನಕ್ಕೆ ಗೊತ್ತಾ?
ನಮ್ಮ ಮುಖ ನೋಡುವ ಮುಂಚೆನೇ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರೆ.

***

ಸುಂದರವಾದ ಹುಡುಗಿ ಸಿಕ್ಕಿದ ಕೂಡಲೇ ಆಕೆಯನ್ನು ಪ್ರೀತಿಸಬೇಡ
ಆಕೆಗಾಗಿ ನಿನ್ನ ನಿದ್ದೆಯನ್ನು ಹಾಳು ಮಾಡಿಕೊಳ್ಳಬೇಡ
ಎರಡು ದಿನ ಖುಷಿ ಖುಷಿಯಾಗಿ ನಿನ್ನನ್ನು ಭೇಟಿಯಾಗಿ..
ಮೂರನೇ ದಿನ ಎನ್ನುವಳು "ನನಗಾಗಿ ಕಾಯಬೇಡ"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X