ಆದಿಚುಂಚನಗಿರಿಯಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ
ಬೆಂಗಳೂರು, ಮೇ 31 : ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಆಗಮ ಮಹಾವಿದ್ಯಾಲಯದಲ್ಲಿ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. 10/6/2020ರಂದು ಸಂದರ್ಶನ ನಡೆಯಲಿದೆ.
Recommended Video
ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯದಲ್ಲಿ ವಿವಿಧ ವಿಷಯಗಳ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಈ ಕುರಿತು ಪ್ರಕಟಣೆ ಹೊರಿಡಿಸಿದೆ.
ಧಾರವಾಡ; ಜೂನ್ 1ರಂದು ವಿವಿಧ ಹುದ್ದೆಗೆ ನೇರ ಸಂದರ್ಶನ
ಸಹಾಯಕ ಪ್ರಾಧ್ಯಾಪಕರು (ಅಲಂಕಾರ ಶಾಸ್ತ್ರ) 2, ಸಹಾಯಕ ಪ್ರಾಧ್ಯಾಪಕರು (ಅದ್ವೈತವೇದಾಂತ ಶಾಸ್ತ್ರ) 1, ಸಹಾಯಕ ಪ್ರಾಧ್ಯಪಕರು (ಶೈವಾಗಮ) 1, ಸಹಾಯಕ ಪ್ರಾಧ್ಯಾಪಕರು (ಕೃಷ್ಣಯರ್ಜುವೇದ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿ
ಸಹ ಶಿಕ್ಷಕರು 12, ಆಂಗ್ಲ 2, ಕನ್ನಡ 2, ಗಣಿತ 1, ಇತಿಹಾಸ 1, ಸಂಗೀತ ಹಾಡುಗಾರಿಕೆ 1, ತಬಲಾ 1, ಹಾರ್ಮೋನಿಯಂ 1 ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಯಲಿದೆ.
ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ
ಆಸಕ್ತ ಅಭ್ಯರ್ಥಿಗಳು 10/6/2020ರಂದು ಬೆಳಗ್ಗೆ 9.30ರಿಂದ ನೇರ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂದರ್ಶನ ನಡೆಯುವ ಸ್ಥಳ ಶ್ರೀ ಕ್ಷೇತ್ರ ಆದಿಚುಂಚನಗಿರಿ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9449259233, 9886958585, 944812441 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.