ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ
ಬೆಂಗಳೂರು, ಮೇ 20 : ಕರ್ನಾಟಕದ ಪಂಚಾಯತ್ ರಾಜ್ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲಾಗಿದೆ. ಕೆಲವೇ ತಿಂಗಳಿನಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
Recommended Video
ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್ ರಾಜ್ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು 2019ರ ಕರಡನ್ನು ಸರ್ಕಾರ ರಚಿಸಲು ಪ್ರಸ್ತಾಪಿಸಲಾಗಿದೆ. ಕರಡು ಅಧಿಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು
ಕರಡು ಅಧಿಸೂಚನೆ ಪ್ರಕಟಗೊಂಡ 15 ದಿನದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿದರೆ ಅವುಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ. ಅವಧಿ ಮುಗಿದ ಬಳಿಕ ಬಂದ ಯಾವುದೇ ಆಕ್ಷೇಪಣೆಗಳನ್ನು ಸರ್ಕಾರ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಲ್ಲ
ಒಟ್ಟು 7021 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 4ನೇ ಹಂತದ ಲಾಕ್ ಡೌನ್ ಮುಗಿದ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ಹಾಸನದಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿ
ಯಾವ-ಯಾವ ಹುದ್ದೆಗಳು
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ 30, ಉಪ ಕಾರ್ಯದರ್ಶಿ (ಪಂಚಾಯತ್ ರಾಜ್) 69, ಮುಖ್ಯ ಲೆಕ್ಕಾಧಿಕಾರಿ 30, ಮುಖ್ಯ ಯೋಜನಾಧಿಕಾರಿ 30, ಸಹಾಯಕ ಕಾರ್ಯದರ್ಶಿ/ಕಾರ್ಯ ನಿರ್ವಾಹಕ ಅಧಿಕಾರಿ 265.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) 226, ತಾಲೂಕು ಯೋಜನಾಧಿಕಾರಿ 50, ಲೆಕ್ಕಾಧಿಕಾರಿ 53, ಯೋಜನಾ ನಿರ್ಣಾಯಕ ಮತ್ತು ಮೌಲ್ಯಮಾಪನ ಅಧಿಕಾರಿ 38, ಸಹಾಯಕ ಲೆಕ್ಕಾಧಿಕಾರಿ 50, ಪ್ರಾದೇಶಿಕ ಯೋಜನಕಾರರು/ಸಾಂಖ್ಯಿಕ ಅಧಿಕಾರಿ 37 ಹುದ್ದೆಗಳು.
ಅರ್ಜಿ ಹಾಕಲು ಸಿದ್ಧರಾಗಿ
ಸಹಾಯಕ ಸಾಂಖ್ಯಿಕ ಅಧಿಕಾರಿ 20, ಅಧೀಕ್ಷಕ 268, ಲೆಕ್ಕಾಧೀಕ್ಷಕ 294, ಪ್ರಥಮ ದರ್ಜೆ ಸಹಾಯಕ 703, ಯೋಜನಾ ಸಹಾಯಕ 352, ಪ್ರಥಮ ದರ್ಜೆ ಸಹಾಯಕ 724, ಶ್ರೀಘ್ರಲಿಪಿಗಾರ 413, ದ್ವಿತೀಯ ದರ್ಜೆ ಸಹಾಯಕ 903 ಹುದ್ದೆಗಳು.
ಆಕ್ಷೇಪಣೆ ಸಲ್ಲಿಸುವುದು ಹೇಗೆ?
ಬೆರಳಚ್ಚುಗಾರರು 730, ವಾಹನ ಚಾಲಕ 523, ದಲಾಯತ್ 1213 ಹುದ್ದೆಗಳು ಸೇರಿ ಒಟ್ಟು 7021 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳ ಕುರಿತು ಆಕ್ಷೇಪಣೆಗಳು ಇದ್ದರೆ ರಾಜ್ಯಪತ್ರದಲ್ಲಿ ಪ್ರಕಟವಾದ 15 ದಿನದೊಳಗೆ ಸಲ್ಲಿಸಬೇಕು.
ಆಕ್ಷೇಪಣೆ ಸಲ್ಲಿಸಲು ವಿಳಾಸ : ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ, ಬಹುಮಹಡಿಗಳ ಕಟ್ಟಡ, ಬೆಂಗಳೂರು 560001.