ಕೆಎಸ್ಟಿಡಿಸಿ ನೇಮಕಾತಿ; ದೆಹಲಿ ಕರ್ನಾಟಕ ಭವನದಲ್ಲಿ ಕೆಲಸ
ಬೆಂಗಳೂರು, ಜನವರಿ 25 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸ್ತಕರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು 3/2/2020 ಕೊನೆಯ ದಿನ.
ಕೆಎಸ್ಟಿಡಿಸಿಯು ದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ 45 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಗುತ್ತಿಗೆಯ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಸ್ಪೀಡ್/ರಿಜಿಸ್ಟರ್ ಪೋಸ್ಟ್/ಕೋರಿಯರ್ ಅಥವ ನೇರವಾಗಿ ಸಲ್ಲಿಸಬಹುದಾಗಿದೆ.
ಕೆಎಸ್ಟಿಡಿಸಿ ನೇಮಕಾತಿ; 76 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ
ಆಯ್ಕೆಯಾದ ಅಭ್ಯರ್ಥಿಗಳು ನವದೆಹಲಿಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಯಾವುದೇ ಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ನಿಗಮವು ಹೊಂದಿದೆ. ನಿಗದಿತ ನಮೂನೆಯಲ್ಲಿ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಶಿವಮೊಗ್ಗ; 69 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ
ವೆಬ್ಸೈಟ್ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಮುಚ್ಚಿದ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಬರೆದು ಅರ್ಜಿಯನ್ನು ಕಳಿಸಬೇಕು.
ಕೆಪಿಎಸ್ಸಿ ನೇಮಕಾತಿ; ಮಹತ್ವದ ಬದಲಾವಣೆ
ಯಾವ-ಯಾವ ಹುದ್ದೆಗಳು
ವ್ಯವಸ್ಥಾಪಕರು (ಹೋಟೆಲ್) 1, ಸಹಾಯಕ ವ್ಯವಸ್ಥಾಪಕ (ಹೋಟೆಲ್) 3, ಸ್ವಾಗತಗಾರರು 4, ಸೌಸ್ ಶೇಫ್ 1, ದ್ವಿತೀಯ ದರ್ಜೆ ಸಹಾಯಕ/ಬಿಲ್ ಕ್ಲರ್ಕ್/ ಕ್ಯಾಷಿಯರ್ 4, ಹೌಸ್ ಕೀಪಿಂಗ್ ಸೂಪರ್ ವೈಸರ್ 2, ಉಗ್ರಾಣಿಕರು 1, ಅಡುಗೆಯವರು 2, ಸಹಾಯಕ ಅಡುಗೆಯವರು 2, ರೂಂ ಬಾಯ್ 9, ಅಡುಗೆ ಸಹಾಯಕರು 4, ಮಾಣಿ (ರೆಸ್ಟೋರೆಂಟ್) 10, ಸಾಮಾನ್ಯ ಉಪಯೋಗಿ ಕೆಲಸಗಾರರು (ಸ್ವೀಪರ್/ಕ್ಲೀನರ್/ಗಾರ್ಡನರ್) 2 ಹುದ್ದೆಗಳು.
ವೆಬ್ಸೈಟ್ನಲ್ಲಿ ಮಾಹಿತಿ
ಎಲ್ಲಾ ಹುದ್ದೆಗಳ ವೇತನ, ವಿದ್ಯಾರ್ಹತೆಯ ವಿವರವನ್ನ http://kstdc.co/ ವೆಬ್ಸೈಟ್ನಲ್ಲಿ ನೀಡಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಸಹ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳಿಗೆ ಸೂಚನೆ
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ಪೀಡ್ ಪೋಸ್ಟ್/ರಿಜಿಸ್ಟರ್ ಪೋಸ್ಟ್/ ಕೋರಿಯರ್ ಅಥವಾ ನೇರವಾಗಿ ತಲುಪಿಸಬಹುದು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್ ಮೇಲೆನಮೂದಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
03/02/2020ರ
ನಂತರದಲ್ಲಿ
ಸ್ವೀಕೃತಗೊಂಡ
ಅರ್ಜಿಗಳನ್ನು
ಯಾವುದೇ
ಕಾರಣಕ್ಕೂ
ಪರಿಗಣಿಸಲಾಗುವುದಿಲ್ಲ.
ನಿಗಮವು
ನೀಡಿರುವ
ನಮೂನೆಯಲ್ಲದೇ,
ಇತರೆ
ಯಾವುದೇ
ನಮೂನೆಯಲ್ಲಿ
ಸ್ವವಿವರವನ್ನು
ಸಲ್ಲಿಸಿದರೆ
ಅರ್ಜಿಯನ್ನು
ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು
ನವದೆಹಲಿಯಲ್ಲಿ
ಕರ್ತವ್ಯ
ನಿರ್ವಹಿಸಲು
ಸಿದ್ಧರಾಗಿರಬೇಕು.
ಅರ್ಜಿ ಸಲ್ಲಿಸಲು ವಿಳಾಸ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಿ, ವಿದ್ಯಾರ್ಹತೆ ಮತ್ತು ಸೇವಾ ಅನುಭವ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ 3/2/2020ರೊಳಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ವ್ಯವಸ್ಥಾಪಕರು
(ಆಡಳಿತ)
ಕರ್ನಾಟಕ
ರಾಜ್ಯ
ಪ್ರವಾಸೋದ್ಯಮ
ಅಭಿವೃದ್ಧಿ
ನಿಗಮ
ನಿ.,
ಕಾರ್ಯಅನಿರ್ವಾಹಕ
ಕಛೇರಿ,
ನೆಲಮಹಡಿ,
ಯಶವಂತಪುರ
ಟಿಟಿಎಂಸಿ,
ಬಿ.ಎಂ.ಟಿ.ಸಿ
ಬಸ್
ನಿಲ್ದಾಣ,
ಯಶವಂತಪುರ
ವೃತ್ತ,
ಬೆಂಗಳೂರು-560
022.