ರಾಮನಗರದ ಯುವಜನತೆಗಾಗಿ "ಬೃಹತ್ ಉದ್ಯೋಗ ಮೇಳ" ಆಯೋಜನೆ
ರಾಮನಗರ, ಮೇ 6: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಇಲಾಖೆ ವತಿಯಿಂದ ರಾಮನಗರದಲ್ಲಿ ಯುವಜನತೆಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳ ಪಾಲ್ಗೊಳ್ಳಲಿದ್ದು, 5,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿ ನಿರೀಕ್ಷಿಸಲಾಗಿದೆ.
ಸ್ಥಳ: ಬಿಜಿಎಸ್ ವರ್ಲ್ಡ್ ಸ್ಕೂಲ್ನಲ್ಲಿ ಸಂದರ್ಶನ ನಡೆಯಲಿದೆ.
ದಿನಾಂಕ: 10 ಮೇ 2022(ಬೆಳಿಗ್ಗೆ 09 ರಿಂದ ಸಂಜೆ 06ರ ವರೆಗೆ)
ಆಸಕ್ತ ಅರ್ಹ ಅಭ್ಯರ್ಥಿಗಳು ಇಂದೇ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವೆಬ್ ತಾಣದಲ್ಲಿ ಸಿಗಲಿರುವ ಲಿಂಕ್(http://skillconnect.kaushalkar.com/app/student-jobfair) ಮೂಲಕ ನೋಂದಾಯಿಸಿಕೊಳ್ಳಬಹುದು.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಉದ್ಯೋಗ
ಮೇಳದ
ಪೂರ್ಣ
ವಿಳಾಸ:
ಬಾಲಗಂಗಾಧರನಾಥ
ಸ್ವಾಮೀಜಿ
ವರ್ಲ್ಡ್
ಸ್ಕೂಲ್
ಅರ್ಚಕರಹಳ್ಳಿ,
ಜನಪದ
ಲೋಕದ
ಪಕ್ಕ,
ಮೈಸೂರು
ರಸ್ತೆ,
ರಾಮನಗರ
ಜಿಲ್ಲೆ
ಕನಕಪುರ
562159
ಸಂದರ್ಶನಕ್ಕೆ
ಹಾಜರಾಗುವ
ಮುನ್ನ
ಈ
ದಾಖಲೆಗಳನ್ನು
ತಪ್ಪದೇ
ತನ್ನಿ;
ಶೈಕ್ಷಣಿಕ
ದಾಖಲೆಗಳ
ಜೆರಾಕ್ಸ್
ಪ್ರತಿ,
ಪಾಸ್
ಪೋರ್ಟ್
ಫೋಟೋ,
ಆಧಾರ್
ಕಾರ್ಡ್
ಹಾಗೂ
ಸ್ವವಿವರವುಳ್ಳ
ಅರ್ಜಿ
ಪ್ರತಿ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳುಳ್ಳ ರೆಸ್ಯುಮ್ ಇಮೇಲ್ ಮಾಡಬಹುದು [email protected]
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: +91 96066 50597, + 91 74118 45322
ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ತಪ್ಪದೇ ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು ಎಂದು ಕೌಶಲ್ಯ ಅಭಿವೃದ್ಧಿ ನಿಗಮ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.