ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಳ್ಳಾರಿ, ಜೂನ್ 07; ಬಳ್ಳಾರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 18ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬಳ್ಳಾರಿಯ ಕೊಳಗಲ್ಲು(ಅಲ್ಲಿಪುರ) ಬಿ.ಐ.ಟಿ.ಎಂ ಹತ್ತಿರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಸಿಬಿಎಸ್ಸಿ)ಯಲ್ಲಿ ಖಾಲಿ ಇರುವ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ECIL ನೇಮಕಾತಿ 2022: ಟ್ರೇಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಸ್ವವಿವರ ಮತ್ತು ಅಗತ್ಯ ದಾಖಲೆಗಳೊಂದಿಗೆ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಐಟಿಎಂ ಕಾಲೇಜು ಹತ್ತಿರ, ಕೊಳಗಲ್ಲು (ಅಲ್ಲಿಪುರ) ಇವರಿಗೆ ಜೂನ್ 18ರೊಳಗೆ ಅರ್ಜಿ ಸಲ್ಲಿಸಬಹುದು.
ಕಲಬುರಗಿ; ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸದರಿ ವಸತಿ ಶಾಲೆ ಅಥವಾ ಪ್ರಾಂಶುಪಾಲರಾದ ಬಸವರಾಜ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 7353346069, 8722408870, 9916315278.
ಗಡಿ ಭದ್ರತಾ ಪಡೆಯಲ್ಲಿ 281 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿಕ್ಷಕಿ, ಆಯಾ ಹುದ್ದೆಗೆ ನೇರ ಸಂದರ್ಶನ; ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2022-23ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕಿ ಹಾಗೂ ಒಬ್ಬ ಆಯಾರನ್ನು ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.
ಜೂನ್ 13ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ನಡೆಯಲಿದೆ. ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕ ಹುದ್ದೆ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದು, ಪದವಿ ಪೂರ್ವ ಶಿಕ್ಷಣ (ಪಿಯುಸಿ) ದಲ್ಲಿ ಶೇ 50 ಅಂಕ ಪಡೆದಿರುವ ಹಾಗೂ ಡಿಪ್ಲೊಮಾ ಇನ್ ನರ್ಸರಿ ಟೀಚರ್ ಎಜುಕೇಶನ್, ಡಿಪ್ಲೊಮಾ ಇನ್ ಅರ್ಲಿ ಚೈಲ್ಡ್ ಹುಡ್ ಎಜುಕೇಶನ್, ಪ್ರೀ ಸ್ಕೂಲ್ ಎಜುಕೇಶನ್, ಬಿ.ಇಡಿ-ನರ್ಸರಿ ಇವುಗಳಲ್ಲಿ ಯಾವುದಾದರೂ ಒಂದು ಅರ್ಹತೆ ಹೊಂದಿರುವ 45 ವರ್ಷದ ಒಳಗಿನ ವಯಸ್ಸಿನವರು ಅರ್ಜಿ ಸಲ್ಲಿಸಿ, ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಪೂರ್ವ ಪ್ರಾಥಮಿಕ ಶಾಲೆ ಆಯಾ ಹುದ್ದೆ ಮಹಿಳೆಯರಿಗೆ ಮಾತ್ರ ಮೀಸಲು. ಎಸ್. ಎಸ್. ಎಲ್. ಸಿ ಉತ್ತೀರ್ಣರಾದ 45 ವರ್ಷದ ಒಳಗಿನ ಆಸಕ್ತಿಯುಳ್ಳ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಜೂನ್ 10 ರೊಳಗೆ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ. 15ರಂದು ನೇರ ಸಂದರ್ಶನ ನಡೆಯಲಿದೆ.
ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೊಮಾ ಅಥವಾ ಡಿ.ಇಡಿ, ಅಥವಾ ನರ್ಸರಿ ತರಬೇತಿ ಪ್ರಮಾಣಪತ್ರ, ವೃತ್ತಿ ಅನುಭವ ಹೊಂದಿರುವ ಬಗ್ಗೆ ಪ್ರಮಾಣಪತ್ರ, ನಿವಾಸಿ ದೃಡೀಕರಣ ಪತ್ರ, ಆಧಾರ್ ಕಾರ್ಡ್ ಲಗತ್ತಿಸಬೇಕು.
ಅಪ್ರೆಂಟಿಸ್ಶಿಪ್ ಮೇಳ; ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂನ್ 13 ರಂದು ಅಪ್ರೆಂಟಿಸ್ಶಿಪ್ ಮೇಳ ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 9 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆರಂಭವಾಗಲಿರುವ ಮೇಳದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆ, ಕಾರ್ಖಾನೆ ಮತ್ತು ಕಂಪನಿಗಳು ಭಾಗವಹಿಸಲಿವೆ. ಕೊಪ್ಪಳ ಜಿಲ್ಲೆ ಹಾಗೂ ಸುತ್ತಮುತ್ತಲಿನ ಐಟಿಐ ಉತ್ತೀರ್ಣರಾದ ಎಲ್ಲಾ ವೃತ್ತಿಗಳ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆಗಮಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ 5 ಸೆಟ್ ಜೆರಾಕ್ಸ್ ಪ್ರತಿ ತರಬೇಕು. ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬಿಐಇಆರ್ಟಿ ಹುದ್ದೆಗಳಿಗೆ ಅರ್ಜಿ ಹಾಕಿ; 2022-23 ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮಂಜೂರಾದ ಬಿಐಇಆರ್ಟಿ ಖಾಲಿ ಇರುವ ಹುದ್ದೆಗಳಿಗೆ ನೇರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.
ಅರ್ಜಿಯನ್ನು
8/6/2022
ರಂದು
ಕಛೇರಿ
ಸಮಯದೊಳಗೆ
ಉಪನಿರ್ದೇಶಕರು
(ಆಡಳಿತ)
ಹಾಗೂ
ಪದನಿಮಿತ್ತ
ಜಿಲ್ಲಾ
ಯೋಜನಾ
ಸಮನ್ವಯಾಧಿಕಾರಿಗಳ
ಕಛೇರಿ
ಶಿವಮೊಗ್ಗ
ಇಲ್ಲಿಗೆ
ಸಲ್ಲಿಸಬಹುದು.
ಅಭ್ಯರ್ಥಿಗಳು
ಅರ್ಜಿಯಲ್ಲಿ
ತಮ್ಮ
ಮೊಬೈಲ್
ಸಂಖ್ಯೆಯನ್ನು
ಕಡ್ಡಾಯವಾಗಿ
ನಮೂದಿಸುವುದು.
2021-22ನೇ
ಸಾಲಿನಲ್ಲಿ
ನೇರಗುತ್ತಿಗೆಯಡಿಯಲ್ಲಿ
ಕೆಲಸ
ನಿರ್ವಹಿಸಿದ
ಅಭ್ಯರ್ಥಿಗಳಿಗೆ
ಆದ್ಯತೆ
ಇದೆ.
ಪ್ರಾಥಮಿಕ
ವಿಭಾಗಕ್ಕೆ
ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ/
ಪಿಯುಸಿ/
ಎಂಸಿಟಿಟಿ
ಮತ್ತು
ವಿಶೇಷ
ಡಿಇಡಿ.
ಪ್ರೌಢ
ಶಾಲಾ
ವಿಭಾಗಕ್ಕೆ
ಬಿಎ/
ಬಿಎಸ್ಸಿ,
ವಿಶೇಷ
ಬಿಇಡಿ.
Recommended Video