ಸಂಶೋಧನಾ ಸಹಾಯಕರ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 17 : ಇಂಡಿಯನ್ ಕೌನ್ಸಿಲ್ ಫಾರ್ ಸೋಶಿಯಲ್ ಸೈನ್ಸ್ ರಿಸರ್ಚ್, ನವದೆಹಲಿ ವತಿಯಿಂದ ನಡೆಸಲಾಗುತ್ತಿರುವ ಸಂಶೋಧನೆಗೆ ಸಹಾಕರು ಬೇಕಾಗಿದ್ದಾರೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಐಸಿಎಸ್ಎಸ್ಆರ್ ವತಿಯಿಂದ ಡಾ. ಟಿ. ಎಸ್. ದೇವರಾಜ ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು An Evaluation of Economic cost of production and marketing of Biofuels in India ಎಂಬ ವಿಷಯದಲ್ಲಿ ಕೈಗೊಂಡಿರುವ ಸಂಶೋಧನಾ ಯೋಜನೆಗೆ ಸಂಶೋಧನಾ ಸಹಾಯಕರು ಬೇಕಾಗಿದ್ದಾರೆ.
ಗ್ರಾ. ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 37 ಹುದ್ದೆಗಳು
ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಹಾಗೂ ಅಭ್ಯರ್ಥಿಗಳ ಸೇವೆಯು ತೃಪ್ತಿಕರವಾಗಿದ್ದರೆ ಮತ್ತೊಂದು ವರ್ಷಕ್ಕೆ ಮುಂದುವರೆಸಲಾಗುತ್ತದೆ. ಶಿಷ್ಯವೇತನ ಮಾಸಿಕ 20 ಸಾವಿರ ರೂಗಳಾಗಿರುತ್ತದೆ.
ಕೆಪಿಎಸ್ಸಿ ನೇಮಕಾತಿ; ಪದವಿ ಪೂರ್ವ ವಿದ್ಯಾರ್ಹತೆ ಹುದ್ದೆಗಳ ವಿವರ
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು M.Com with NET/SLET ಜೊತೆಗೆ ಕಂಪ್ಯೂಟರ್ನಲ್ಲಿ SPSS, Excel, Tally ಮತ್ತು ಇನ್ನಿತರ ತಂತ್ರಾಶಗಳ ಬಗ್ಗೆ ಅರಿವನ್ನು ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ವಿಳಾಸಕ್ಕೆ ಸ್ವವಿವರದೊಂದಿಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ
ಹೆಚ್ಚಿನ ಮಾಹಿತಿಗಾಗಿ ಡಾ.ಟಿ.ಎಸ್.ದೇವರಾಜ, ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು, ವಾಣಿಜ್ಯ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಹಾಸನ-573226 ಇವರಿಗೆ [email protected] ಇ-ಮೇಲ್ಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9880761877 ಮೊಬೈನ ನಂಬರ್ಗೆ ಸಂಪರ್ಕಿಸಬಹುದು.