ಕೊಡಗು ಜಿಲ್ಲೆಯಲ್ಲಿ ಗ್ರಾಮ ಒನ್: ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನ
ಮಡಿಕೇರಿ ಫೆ.09: ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು ಒನ್ ಮಾದರಿಯಲ್ಲಿ ಫ್ರಾಂಚೈಸಿ ಆಧಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ
ಗ್ರಾಮ ಒನ್ ಯೋಜನೆಯನ್ನು ಸರ್ಕಾರ ಈಗಾಗಲೇ ಲೋಕಾರ್ಪಣೆ ಮಾಡಿದೆ. ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆ ಪಡೆಯಲು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ(ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಕೊಡಗು
ಜಿಲ್ಲೆಯಲ್ಲಿ
ಈಗಾಗಲೇ
68
ಗ್ರಾಮ
ಪಂಚಾಯತ್ಗಳಲ್ಲಿ
'ಗ್ರಾಮ
ಒನ್'
ಯೋಜನೆಯನ್ನು
ಯಶಸ್ವಿಯಾಗಿ
ಪ್ರಾರಂಭಿಸಲಾಗಿದೆ.
ಉಳಿದಂತೆ
36
ಗ್ರಾಮ
ಪಂಚಾಯತ್ಗಳಲ್ಲಿ
ಸಮಗ್ರ
ನಾಗರಿಕ
ಸೇವಾ
ಕೇಂದ್ರ
ಗ್ರಾಮ
ಒನ್
ಆರಂಭಿಸಲು
ಆಸಕ್ತ
ಪ್ರಾಂಚೈಸಿಗಳಿಂದ
ಅರ್ಜಿ
ಆಹ್ವಾನಿಸಲಾಗಿದೆ.
ಮಡಿಕೇರಿ ತಾಲ್ಲೂಕಿನ ಮಡಿಕೇರಿ ಹೋಬಳಿಯ ಹೊಸ್ಕೇರಿ, ನಾಪೋಕ್ಲು ಹೋಬಳಿಯ ಎಮ್ಮೆಮಾಡು, ಭಾಗಮಂಡಲ ಹೋಬಳಿಯ ಕರಿಕೆ, ಸಂಪಾಜೆ ಹೋಬಳಿಯ ಪೆರಾಜೆ.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು ಶೆಟ್ಟಳ್ಳಿ, ಸೋಮವಾರಪೇಟೆ ಹೋಬಳಿಯ ಗಣಗೂರು, ನೇರುಗಳಲೆ, ಮಾದಾಪುರ, ಚೌಡ್ಲು, ಶನಿವಾರಸಂತೆಯ ನಿಡ್ತ,
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಕಂಬಿಬಾಣೆ, ಕೆದಕಲ್, ಹರದೂರು, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕುಶಾಲನಗರ ಹೋಬಳಿಯ ಗುಡ್ಡೆಹೊಸೂರು, ವಾಲ್ನೂರು ತ್ಯಾಗತ್ತೂರು.
ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಹೋಬಳಿಯ ಕದನೂರು, ಕೆದಮುಳ್ಳೂರು, ಅಮ್ಮತ್ತಿ ಹೋಬಳಿಯ ಹೊಸೂರು, ಅಮ್ಮತ್ತಿ, ಮಾಲ್ದಾರೆ, ಬಿಳುಗುಂದ.
ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಹೋಬಳಿಯ ಹಾತೂರು, ಬಿ.ಶೆಟ್ಟಿಗೇರಿ, ಕಿರಗಂದೂರು, ಮಾಯಾಮುಡಿ, ಬಾಳೆಲೆ ಹೋಬಳಿಯ ನಿಟ್ಟೂರು, ಪೊನ್ನಪ್ಪಸಂತೆ, ಹುದಿಕೇರಿಯ ಬಲ್ಯಮಂಡೂರು, ಬಿರುನಾಣಿ, ಶ್ರೀಮಂಗಲ ಹೋಬಳಿಯ ಕೆ.ಬಾಡಗ ಮತ್ತು ನಾಲ್ಕೇರಿ.
ಆಸಕ್ತ
ಪ್ರಾಂಚೈಸೀಸ್ಗಳು
ಏನು
ಮಾಡಬಹುದು
ಆಸಕ್ತರು
ಅರ್ಜಿಯನ್ನು
ವೆಬ್ಸೈಟ್:
http://karnatakaone.gov.in,
ಅಥವಾ
sevasindhu.karnataka.gov.in
ಈ
ಲಿಂಕ್ನ
ಮೂಲಕ
ಅರ್ಜಿ
ಸಲ್ಲಿಸಬಹುದಾಗಿದೆ.
ಹೆಚ್ಚಿನ
ಮಾಹಿತಿಗೆ
ಜಿಲ್ಲಾ
ಪ್ರಾಜೆಕ್ಟ್
ಮ್ಯಾನೇಜರ್,
ಜಿಲ್ಲಾಧಿಕಾರಿ
ಕಚೇರಿ,
ಮೊ.ಸಂ.
8861682120
ಇವರಿಂದ
ಪಡೆಯಬಹುದಾಗಿದೆ
ಎಂದು
ಹೆಚ್ಚುವರಿ
ಜಿಲ್ಲಾಧಿಕಾರಿ
ರಾಜು
ಮೊಗವೀರ
ಅವರು
ತಿಳಿಸಿದ್ದಾರೆ.
ಗ್ರಾಮ
ಒನ್:
ಇದು
ಕರ್ನಾಟಕ
ಸರ್ಕಾರದ
ಮಹತ್ವಾಕಾಂಕ್ಷಿ
ಯೋಜನೆಯಾಗಿದ್ದು,
ಎಲ್ಲಾ
ಇಲಾಖೆಗಳ
ನಾಗರಿಕ
ಸೇವೆಗಳನ್ನು
ಗ್ರಾಮೀಣ
ನಾಗರಿಕರಿಗೆ
ಅವರ
ಗ್ರಾಮಗಳಲ್ಲಿಯೇ
ತಲುಪಿಸುವ
ಗುರಿಯನ್ನು
ಹೊಂದಿದೆ.
ಈ
ಯೋಜನೆಯನ್ನು
ನಾಗರಿಕ
ಕೇಂದ್ರಿತ
ಸೇವೆಗಳಾದ
ಜಿ2ಸಿ
ಸೇವೆಗಳು,
ಬ್ಯಾಂಕಿಂಗ್
ಸೇವೆಗಳು,
ಆರ್
ಟಿ
ಐ
ಪ್ರಶ್ನೆಗಳು
ಹಾಗೂ
ಇನ್ನಿತರೇ
ಸೇವೆಗಳನ್ನು
ಗ್ರಾಮ
ಮಟ್ಟದಲ್ಲಿ
ಎಲ್ಲಾ
ನಾಗರಿಕರಿಗೆ
ತಲುಪಿಸುವ
ಏಕ-ಬಿಂದು
ಸಹಾಯ
ಕೇಂದ್ರವಾಗಿರುವಂತೆ
ಯೋಜಿಸಲಾಗಿದೆ.
ಗ್ರಾಮ ಒನ್ ಕೇಂದ್ರಗಳ ಪ್ರಯೋಜನಗಳು ಹೀಗಿವೆ:
- ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ,ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
- ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ.
- ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು.
- ಮಧ್ಯವರ್ತಿಗಳಿಂದ ಯಾವುದೇ ಅಪಾಯವಿಲ್ಲ.
- ಗ್ರಾಮ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
- ಪ್ರತಿ ಗ್ರಾಮಒನ್ ಕೇಂದ್ರವು ಮೈಕ್ರೋ ಬ್ಯಾಂಕಿಂಗ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಸಾಧಿಸಲಾಗುತ್ತದೆ
- ಸರ್ಕಾರದ ಸೇವೆಗಳನ್ನು ಪಡೆಯಲು ನಾಗರಿಕರು ಯಾರನ್ನೂ ಅವಲಂಬಿಸಬೇಕಾಗಿಲ್ಲವಾದ್ದರಿಂದ ಸ್ವಾವಲಂಬನಾ ಮನೋಭಾವವನ್ನು ಎತ್ತಿಹಿಡಿದಂತಾಗಿದೆ
- ಸೇವೆಗಳ ಸಮಯೋಚಿತ ಮತ್ತು ಗುಣಮಟ್ಟದ ವಿತರಣೆಯ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಾಗುತ್ತದೆ
ಈ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರಕ್ಕೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕೆ ನೇತೃತ್ವ ವಹಿಸಬೇಕೆಂದರು ಎಂದು ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.