ಕರ್ನಾಟಕದಲ್ಲಿ ಈ ವಾರ ಬಿರು ಬಿಸಿಲು, ತಾಪಮಾನ ಎಷ್ಟಿರಲಿದೆ?
ಕರ್ನಾಟಕದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇನ್ನೊಂದು ದಿನ ಮಳೆಯ ಅಬ್ಬರ ಕಾಣಬಹುದಾಗಿದೆ. ಮಿಕ್ಕಂತೆ ಮುಂದಿನ ಶುಕ್ರವಾರದ ತನಕ ರಾಜ್ಯದ ಬಹುತೇಕ ಎಲ್ಲೆಡೆ ಬಿರು ಬಿಸಿಲಿನ ತಾಪಮಾನ ಕಾಡಲಿದೆ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಉತ್ತರ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಾಗ ಸುರಿಯುತ್ತಿದ್ದ ಅಕಾಲಿಕ ಮಳೆಗೂ ಬ್ರೇಕ್ ಬೀಳಲಿದೆ.
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾರದಲ್ಲಿ ಒಂದೆರಡು ದಿನ ಮಾತ್ರ ಒಂದು ಸುತ್ತಿನ ಮಳೆ ನಿರೀಕ್ಷೆಯಿದೆ. ಮಿಕ್ಕಂತೆ ರಾಜ್ಯದೆಲ್ಲೆಡೆ ಸುಡುವ ಬಿಸಿಲು ಕಾಡಲಿದೆ. ಏಪ್ರಿಲ್ 3 ರಂದು ಸೂರ್ಯೋದಯ ಬೆಳಗ್ಗೆ 6.13ಕ್ಕೆ ಆಗಲಿದೆ. ಸೂರ್ಯಾಸ್ತ ಸುಮಾರು 18.33ಕ್ಕೆ ಆಗಲಿದೆ.
ಬೆಂಗಳೂರಿನ ನಗರ ಪ್ರದೇಶದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ. ರಾಜ್ಯದ ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ? ಎಂಬುದರ ಸಚಿತ್ರ ವರದಿ ಇಲ್ಲಿದೆ ವಿನ್ಯಾಸ: ಭರತ್ ಎಚ್. ಸಿ.
ಎಲ್ಲೆಲ್ಲಿ ಮಳೆ ಸಾಧ್ಯತೆ?
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ವಾರದಲ್ಲಿ ಒಂದೆರಡು ದಿನ ಅಲ್ಲಲ್ಲಿ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆಯಿಲ್ಲ
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಈ ವಾರದಲ್ಲಿ ಮಳೆ ನಿರೀಕ್ಷೆಯಿಲ್ಲ.
ಗರಿಷ್ಠ ಹಾಗೂ ಕನಿಷ್ಠ ತಾಪಮಾನ
ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ದಾವಣಗೆರೆಯಲ್ಲಿ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದೆಲ್ಲೆಡೆ ಬಹುತೇಕ 22 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೆಲವೆಡೆ ಒಂದೆರಡು ದಿನ ಸಂಜೆ ವೇಳೆ ತಂಪಾದ ಗಾಳಿ ಬೀಸುವ ನಿರೀಕ್ಷೆಯಿದೆ.
ರಾಜ್ಯದ ಹಲವೆಡೆ ಒಣಹವೆ
ಬೆಂಗಳೂರಲ್ಲಿ
34
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
220ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಕಳೆದ
ಹತ್ತು
ವರ್ಷಗಳಲ್ಲಿ
ಬೆಂಗಳೂರಿನಲ್ಲಿ
ಮಾರ್ಚ್ನಲ್ಲಿ
ನಾಲ್ಕನೇ
ಬಾರಿ
35
ಪ್ಲಸ್
ಗರಿಷ್ಠ
ತಾಪಮಾನ
ದಾಖಲಾಗಿದೆ.
ಏಪ್ರಿಲ್
7ರ
ತನಕ
ಇದೇ
ರೀತಿ
ಬಿಸಿಲು
ಮುಂದುವರೆಯಲಿದೆ.
ಬೆಳಗ್ಗೆ
ವೇಳೆ
ಮಾತ್ರ
ಕೆಲವು
ಕಡೆ
ಮೋಡ
ಕವಿದ
ವಾತಾವರಣ
ಇರಲಿದೆ.