ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ
ಬೆಂಗಳೂರು, ನವೆಂಬರ್ 12: ಸೋಮವಾರ ಬೆಳಗ್ಗಿನ ಜಾವ 2 ಗಂಟೆಗೆ ಇಹಲೋಕ ತ್ಯಜಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಅನಂತ್ ಕುಮಾರ್(59) ನಿಧನಕ್ಕೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.
1959 ಜುಲೈ 22 ರಂದು ಬೆಂಗಳೂರಿನಲ್ಲಿ ಜನಿಸಿದ ಅವರು ಎಬಿವಿಪಿ, ಆರೆಸ್ಸೆಸ್ ಸಂಪರ್ಕಕ್ಕೆ ಬಂದು ಹಂತ ಹಂತವಾಗಿ ಬೆಳೆದು ಕೇಂದ್ರ ಸಚಿವರಾಗುವವರೆಗೆ ರಾಜಕೀಯ ಅನುಭವ ಪಡೆದವರು. ವಾಜಪೇಯಿ ಅವರ ನೇತೃತ್ವದ ಸರ್ಕಾರದ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕ ಅತೀ ಕಿರಿಯ ವಯಸ್ಸಿನ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.
ಶಾಶ್ವತವಾಗಿ ನಮ್ಮನ್ನಗಲಿದ ಸ್ನೇಹ ಜೀವಿ, ಜನಾನುರಾಗಿ ಅನಂತ್ ಕುಮಾರ್
ರಾಜಕೀಯ, ಸಮಾಜಸೇವೆ, ಮಾನವೀಯ ಅಂತಃಕರಣ... ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡದ ಅಸ್ಮಿತೆಯನ್ನು ಸ್ಪುರಿಸಿದ ಅನಂತ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದ್ದು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಲಂಡನ್ನಿನಲ್ಲಿ ಚಿಕಿತ್ಸೆ ಪಡೆದು, ನಂತರ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕಾಲಿಕ ಮರಣಕ್ಕೆ ತುತ್ತಾದ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
ಬೆಂಗಳೂರಿನಲ್ಲಿ ಜನನ
*
1959
ಜುಲೈ
22
ರಂದು
ಬೆಂಗಳೂರಿನಲ್ಲಿ
ಜನನ
*
ತಂದೆ
ಎಚ್
ಎನ್
ನಾರಾಯಣ
ಶಾಸ್ತ್ರಿ,
ತಾಯಿ
ಗಿರಿಜಾ
ಶಾಸ್ತ್ರಿ.
*
ಕೆ
ಎಸ್
ಆರ್ಟ್ಸ್
ಕಾಲೇಜ್
ಹುಬ್ಬಳ್ಳಿಯಲ್ಲಿ
ಬಿ
ಎ
ಪದವಿ.
*
ಕರ್ನಾಟಕ
ವಿಶ್ವ
ವಿದ್ಯಾಲಯ
ಧಾರವಾಡದಿಂದ
ಎಲ್
ಎಲ್
ಬಿ
ಪದವಿ.
*
ಚಿಕ್ಕ
ವಯಸ್ಸಿನಿಂಡಲೂ
ರಾಷ್ಟ್ರೀಯ
ಸ್ವಯಂಸೇವಕ
ಸಂಘ(ಆರೆಸ್ಸೆಸ್)ಮತ್ತು
ಅಖಿಲ
ಭಾರತೀಯ
ವಿದ್ಯಾರ್ಥಿ
ಪರಿಷತ್(ಎಬಿವಿಪಿ)ನೊಂದಿಗೆ
ನಿಕಟ
ಸಂಪರ್ಕ
ಹೊಂದಿದ್ದರು.
*
ಪತ್ನಿ
ತೇಜಸ್ವಿನಿ
ಅನಂತ
ಕುಮಾರ್,
ಇಬ್ಬರು
ಹೆಣ್ಣು
ಮಕ್ಕಳು
ಐಶ್ವರ್ಯ
ಮತ್ತು
ವಿಜೇತಾ
ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ
*
ಇಂದಿರಾ
ಗಾಂಧಿ
ಸರ್ಕಾರದ
ಅವಧಿಯಲ್ಲಿ
ಘೋಷಣೆಯಾದ
ತುರ್ತುಪರಿಸ್ಥಿತಿ
ಸಮಯದಲ್ಲಿ
ಜೈಲುವಾಸ.
*
ಎಬಿವಿಪಿಯ
ರಾಜ್ಯ
ಕಾರ್ದರ್ಶಿಯಾಗಿ
ನಂತರ
1985
ರಲ್ಲಿ
ರಾಷ್ಟ್ರ
ಕಾರ್ಯದರ್ಶಿಯಾಗಿ
ಆಯ್ಕೆಯಾಗಿದ್ದರು.
*
ನಂತರ
ಬಿಜೆಪಿಗೆ
ಸೇರಿದ
ಅವರನ್ನು
ಭಾರತೀಯ
ಯುವ
ಮೋರ್ಚಾ
ರಾಜ್ಯಾಧ್ಯಕ್ಷರನ್ನಾಗಿ
ನೇಮಿಸಲಾಯಿತು.
*
1996
ರಲ್ಲಿ
ಬೆಂಗಳೂರು
ದಕ್ಷಿಣ
ಲೋಕಸಭಾ
ಕ್ಷೇತ್ರದ
ಸದಸ್ಯರಾಗಿ
ಆಯ್ಕೆ
*
1998
ರಲ್ಲಿ
ಮೊದಲ
ಬಾರಿಗೆ
ವೆಬ್
ಸೈಟ್
ವೊಂದನ್ನು
ಚುನಾವಣೆಯ
ಉದ್ದೇಶದಿಂದ
ಆರಂಭಿಸಿದರು.
ಈ
ರೀತಿ
ರಾಜಕಾರಣಿಯಾಗಿ
ವೆಬ್
ಸೈಟ್
ತಯಾರಿಸಿದವರಲ್ಲಿ
ಅನಂತ್
ಕುಮಾರ್
ಮೊದಲಿಗರೆನ್ನಿಸಿದರು.
'ತಾನು ನಿರ್ಮಿಸಿದ ರಾಕೆಟ್ ಎಲ್ಲಿಗೆ ತಲುಪಬೇಕು ಅಂತ ದೇವರೇ ನಿರ್ಧರಿಸುತ್ತಾನೆ'
ಅತೀ ಕಿರಿ ವಯಸ್ಸಿನ ಕೇಂದ್ರ ಸಚಿವ
*
ಅಟಲ್
ಬಿಹಾರಿ
ವಾಜಪೇಯಿ
ಅವರ
ಸರ್ಕಾರದ
ಅವಧಿಯಲ್ಲಿ
ನಾಗರಿಕ
ವಿಮಾನಯಾನ
ಸಚಿವರಾಗಿ
ಸೇವೆ
ಸಲ್ಲಿಸಿದರು.
*
1999
ರಲ್ಲಿ
ಅತ್ಯಂತ
ಕಿರಿ
ವಯಸ್ಸಿನ
ಕೇಂದ್ರ
ಸಚಿವರು
ಎಂಬ
ಹೆಗ್ಗಳಿಕೆಗೆ
ಪಾತ್ರರಾದರು.
*
ಸತತ
ಮೂರು
ಬಾರಿ
ಕೇಂದ್ರ
ಸಚಿವರಾಗಿ
ಆಯ್ಕೆಯಾದ
ಅವರು
ಬಿಜೆಪಿ
ಪ್ರಮುಖ
ನಾಯಕರಲ್ಲೊಬ್ಬರಾದರು.
*
2003
ರಲ್ಲಿ
ರಾಜ್ಯ
ಬಿಜೆಪಿ
ಅಧ್ಯಕ್ಷರಾಗಿದ್ದ
ಅವರ
ಅವಧಿಯಲ್ಲಿ
ವಿಧಾನಸಭೆಯಲ್ಲಿ
ಬಿಜೆಪಿ
ಅತಿದೊಡ್ಡ
ಪಕ್ಷವಾಗಿ
ಹೊರಹೊಮ್ಮಿತ್ತು.
2004
ರಲ್ಲಿ
ಅತೀ
ಹೆಚ್ಚು
ಲೋಕಸಭೆ
ಕ್ಷೇತ್ರಗಳಲ್ಲೂ
ಬಿಜೆಪಿ
ಗೆಲುವು
ಸಾಧಿಸಿತ್ತು.
*
2004
ರಲ್ಲಿ
ರಾಷ್ಟ್ರೀಯ
ಪ್ರಧಾನ
ಕಾರ್ದರ್ಶಿಯಾಗಿ
ಅವರು
ಆಯ್ಕೆಯಾದರು.
*
ಬಿಹಾರ,
ಮಧ್ಯಪ್ರದೇಶ,
ಛತ್ತೀಸ್
ಗಢ
ಮತ್ತಿತರ
ರಾಜ್ಯಗಳಲ್ಲೂ
ಬಿಜೆಪಿಯನ್ನು
ಬೆಳೆಸುವಲ್ಲಿ
ಅವರ
ಕೊಡುಗೆ
ಅಪಾರ.
*
2014
ರ
ಮೇ
26
ರಂದು
ಅವರನ್ನು
ಕೇಂದ್ರ
ರಸಗೊಬ್ಬರ
ಮತ್ತು
ಸಂಸದೀಯ
ವ್ಯವಹಾರಗಳ
ಸಚಿವರನ್ನಾಗಿ
ನೇಮಿಸಲಾಗಿತ್ತು
ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ
ರಾಜಕೀಯದಾಚೆ ಸಮಾಜಸೇವೆ
*
ರಾಜಕಾರಣದ
ಹೊರತಾಗಿ
ಸಾಮಾಜಿಕ
ಸೇವೆಗಳಲ್ಲೂ
ಅನಂತ
ಕುಮಾರ್
ತಮ್ಮನ್ನು
ತಾವು
ತೊಡಗಿಸಿಕೊಂಡವರು.
*
ಅದಮ್ಯ
ಚೇತ
ಪ್ರತಿಷ್ಠಾನದ
ಮಕ್ಕಳಿಗೆ
ಮಧ್ಯಾಹ್ನದ
ಬಿಸಿ
ಊಟ
ಒದಿಗಿಸುವ
ಕೆಲಸವನ್ನೂ
ಅತ್ಯಂತ
ಶ್ರದ್ಧೆಯಿಂದ
ಮಾಡಿದವರು
ಅನಂತ
ಕುಮಾರ್
*
ಬೆಂಗಳೂರಿನಲ್ಲಿ
ಹಸಿರು
ಉಳಿಸುವ
ಸಲುವಾಗಿ
ಪರಿಸರ
ಸಂರಕ್ಷಣೆಗೆ
ಸಂಬಂಧಿಸಿದ
ಹತ್ತು
ಹಲವಾರು
ಕಾರ್ಯಕ್ರಮಗಳನ್ನು
ಮಾಡಿದರು.
*
ಇತ್ತೀಚೆಗೆ
ಕ್ಯಾನ್ಸರ್
ನಿಂದ
ಬಳಲುತ್ತಿದ್ದ
ಅವರು
ಲಂಡನ್
ನಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದರು.
*
ನಂತರ
ಬೆಂಗಳೂರಿಗೆ
ಮರಳಿ
ಶಂಕರ
ಕ್ಯಾನ್ಸರ್
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆದರೂ,
ಚಿಕಿತ್ಸೆ
ಫಲಕಾರಿಯಾಗದೆ
ಕೊನೆಯುಸಿರೆಳೆದರು.
'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...