ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ :ಹರಿಯುತ್ತಿದೆ ಆಮಿಷದ ಹೊಳೆ, ರೂ. 128 ಕೋಟಿ ಮೌಲ್ಯದ ವಸ್ತುಗಳು ವಶ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನಗ-ನಾಣ್ಯ, ಚಿನ್ನ, ಬೆಲೆಬಾಳುವ ವಸ್ತುಗಳ ಹೊಳೆ ಹರಿಯುತ್ತಿದೆ. ಮತದಾರರನ್ನು ಆಮಿಷವೊಡ್ಡಿ ಕೆಡವಲು ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿದಿವೆ. ಪರಿಣಾಮ ಹಿಂದೆಂದೂ ಜಪ್ತಿ ಮಾಡದಷ್ಟು ವಸ್ತುಗಳನ್ನು ಈ ಬಾರಿ ಚುನಾವಣಾ ಆಯೋಗ ವಶಕ್ಕೆ ಪಡೆದಿದೆ.

"ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ 2013ರಲ್ಲಿ ಕೇವಲ 14 ಕೋಟಿ ರೂಪಾಯಿ ಮೌಲ್ಯದ ಹಣ, ಐಷಾರಾಮಿ ವಸ್ತುಗಳು ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇವತ್ತು ಚುನಾವಣೆಗೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ರೂ. 128 ಕೋಟಿ ಮೌಲ್ಯದ ಹಣ, ಚಿನ್ನ, ಬೆಳ್ಳಿ, ಐಷಾರಾಮಿ ವಸ್ತುಗಳು ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿದೆ," ಎಂದು ಮುಖ್ಯ ಚುನಾವಣಾ ಆಯುಕ್ತರಾದ ಒ.ಪಿ. ರಾವತ್ ಹೇಳಿದ್ದಾರೆ.

ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ

ಕರ್ನಾಟಕ ಚುನಾವಣೆಯಲ್ಲಿ ಹಣದ ದುರುಪಯೋಗ ಮತ್ತು ಸುಳ್ಳು, ಪೇಯ್ಡ್ ನ್ಯೂಸ್ ಗಳ ಎಲ್ಲೆ ಮೀರಿದ ಬಳಕೆಯ ಬಗ್ಗೆ ಚುನಾವಣಾ ಆಯೋಗ ಆತಂಕಗೊಂಡಿದೆ. ಚುನಾವಣೆಯ ಮೇಲೆ ಇವುಗಳು ಪರಿಣಾಮ ಬೀರದಂತೆ ತಡೆಯಲು ಆಯೋಗ ಅವಿರತ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಹಾಗಾದರೆ ಇಲ್ಲಿಯವರೆಗೆ ವಶಕ್ಕೆ ಪಡೆದುಕೊಂಡ ವಸ್ತುಗಳೆಷ್ಟು? ಅವುಗಳ ಮೌಲ್ಯ ಏನು? ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಮಾಜ ಘಾತುಕರಿಂದ ಆಯೋಗ ಬರೆಸಿಕೊಂಡ ಬಾಂಡ್ ಗಳೆಷ್ಟು? ಹೊರಡಿಸಲಾದ ಜಾಮೀನು ರಹಿತ ವಾರಂಟ್ ಗಳೆಷ್ಟು?

ಇವುಗಳ ಲೆಕ್ಕವನ್ನು ಈ ಹಿಂದಿನ ಚುನಾವಣೆಗಳ ಜೊತೆ ಹೋಲಿಕೆ ಮಾಡಲಾಗಿದ್ದು, ಅವುಗಳ ಸಂಪೂರ್ಣ ವಿವರ ಇಲ್ಲಿದೆ.

Rs 128 Cr worth of cash, gold, silver, freebies, liquor seizes in Karnataka
English summary
"In 2013 Karnataka elections, total seizure of cash, freebies and liquor was about Rs 14 crore. Today, when we are few days away from polls, we have already seized Rs 128 Cr worth of cash, gold, silver, freebies, liquor etc," sadi Chief Election Commissioner OP Rawat. Here is the full list of seizures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X